ಬೆಂಗಳೂರು: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ದಾಳಿ ಈಗಾಗಲೇ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಹೀಗಾಗಿ ಅಲ್ಲಿಗೆ ತೆರಳಲು ಈಗ ಪ್ರವಾಸಿಗರು ಹಿಂದೇಟು ಹಾಕುವಂತಾಗಿದೆ. ಇನ್ನೊಂದೆಡೆ ಆ ಘಟನೆ ವ್ಯಾಪಾರಕ್ಕೂ ಹೊಡೆತ ನೀಡಿದೆ ಎನ್ನಲಾಗಿದೆ.
ಕಾಶ್ಮೀರದಲ್ಲಿ ಬಿಗಿ ಭದ್ರತೆಯನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲಾಗಿದೆ. ಇದರಿಂದಾಗಿ ವ್ಯಾಪಾರ -ವಹಿವಾಟಿಗೆ ಹೊಡೆದ ಬಿದ್ದಿದೆ. ಬೆಂಗಳೂರಿನ ರೆಸೆಲ್ ಮಾರುಕಟ್ಟೆ ಸೇರಿದಂತೆ ಹಲವು ಮಾರುಕಟ್ಟೆಗೆ ಅಜುವಾ, ಅಂಜೂರ, ಮೆಡ್ಜಾಲ್, ರುತ್ಭ ಸುಖ್ರಿ, ಸಖಾರಿ, ಕಲ್ಮಿ, ಇರಾನಿ, ಅಂಬರ, ಖುದ್ರಿ, ಸಗಾಯಿ ಸೇರಿ ಹಲವು ಬಗೆಯ ಖರ್ಜೂರ ಡ್ರೈಫ್ರೂಟ್ಸ್ ಗಳು ಕಾಶ್ಮೀರ ದಿಂದಲೇ ಬರುತ್ತಾ ಇದ್ದವು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕಾಶ್ಮೀರದ ಖರ್ಜೂರ ಕೂಡ ಬರುತ್ತಿಲ್ಲ ಎನ್ನಲಾಗಿದೆ. ಸದ್ಯಕ್ಕೆ ಎಲ್ಲವೂ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆ ಎಂದು ವ್ಯಪಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.