ಕೋಲಾರ: ಪಹಲ್ಗಾಮ್ ದಾಳಿ ನಡೆಸಲು ಉಗ್ರರನ್ನ, ಮಿಲಿಟರಿಯವರೇ ಒಳಗೆ ಬಿಟ್ರಾ ಎಂದು ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಪಹಲ್ಗಾಮ್ ದಾಳಿಗೆ ಈಗಾಗಲೇ ಪ್ರತ್ಯುತ್ತರವನ್ನು ನೀಡಲಾಗ್ತಿದೆ. ನಾಲ್ಕು ಪ್ಲೈಟ್ ಹಾರಿಸಿ ಬೂಟಾಟಿಕೆ ಕಾರ್ಯಾಚರಣೆ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಉಗ್ರರು ಸತ್ತಿದ್ದು ನಿಜವೇನಾ, ಅಥವಾ ಇಷ್ಟೇ ಉಗ್ರರು ಸತ್ತಿದ್ದಾರೆ ಎಂಬ ಖಚಿತ ಮಾಹಿತಿಯಿಲ್ಲ. ಇಸ್ರೇಲ್ ಸಣ್ಣ ರಾಷ್ಟ್ರವಾದರು, ಶತ್ರುಗಳ ಎದುರು ದಿಟ್ಟವಾಗಿ ಹೋರಾಡಿದ್ದಾರೆ.
ಪಹಲ್ಗಾಮ್ ದಾಳಿಗೆ ಕಾರಣ ಏನು, ಉಗ್ರರು ಹೇಗೆ ಬಂದರು, ಹೇಗೆ ಹೋದರು, ಗುಪ್ತಚರ ಇಲಾಖೆ ವೈಪಲ್ಯವೇ ಕಾರಣಾನಾ ಇದೆಲ್ಲವೂ ಗೊತ್ತಾಗಬೇಕು. ಜೊತೆಗೆ ಅಮೆರಿಕ ಮಾತಿಗೆ ಕಟಿಬಿದ್ದು ಭಾರತ ಕಾರ್ಯಾಚರಣೆ ನಿಲ್ಲಿಸಿದ್ದಾರೆ. ಪಹಲ್ಗಾಮ್ ದಾಳಿ ನಡೆಸಲು ಉಗ್ರರನ್ನ, ಮಿಲಿಟರಿಯವರೇ ಒಳಗೆ ಬಿಟ್ರಾ ಎಂದು ಆಪರೇಷನ್ ಸಿಂದೂರ್ ಕಾರ್ಯಾಚರಣೆ ಟೀಕಿಸೊ ಬರದಲ್ಲಿ ಸೇನೆಗೆ ಅಗೌರವ ತರುವ ಹೇಳಿಕೆ ನೀಡಿದ್ದಾರೆ.