ಆಂಧ್ರ ಪ್ರದೇಶದ ವಿಶಾಖಪಟ್ಟಣನ ಸಿಂಹಾಚಲಂನಲ್ಲಿ ಭೀಕರ ದುರಂತ ಸಂಭವಿಸಿದೆ.
ಇಲ್ಲಿನ ವರಲಕ್ಷ್ಮೀ ನರಸಿಂಹ ಸ್ವಾಮಿ ದೇಗುಲದ ಗೋಡೆ ಕುಸಿದು, 9 ಮಂದಿ ಭಕ್ತರು ಬಲಿಯಾಗಿದ್ದಾರೆ. ದೇಗುಲದ ಚಂದನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ಅಪಾರ ಭಕ್ತರ ಮೇಲೆ 20 ಅಡಿ ಉದ್ದದ ಗೋಡೆ ಏಕಾಏಕಿ ಕುಸಿದಿದೆ.
ಪರಿಣಾಮ ದೇವರ ದರ್ಶನಕ್ಕೆ ಸರದಿ ಸಾಲಲ್ಲಿ ನಿಂತಿದ್ದ 9 ಮಂದಿ ಪ್ರಾಣ ತೆತ್ತಿದ್ದಾರೆ. ಭಾರೀ ಮಳೆಯಿಂದಾಗಿ ಗೋಡೆ ಅಡಿಯ ಮಣ್ಣು ಕುಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಎಸ್ ಡಿಆರ್ ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂಹಾಚಲ ಅವಘಡದ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಚಂದ್ರಬಾಬು ನಾಯ್ಡು, ಸೂಕ್ತ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ ಎಂದಿದ್ದಾರೆ