ಪ್ರತಿಯೊಂದು ಮಕ್ಕಳಿಗೂ ಕೂಡ ಮನೆಯೇ ಮೊದಲ ಪಾಠಶಾಲೆಯಾಗಿರುತ್ತದೆ. ಅದಾದ ಮೇಲೆ ಅವರನ್ನ ತಿದ್ದಿ ತೀಡಿ ಬುದ್ದಿ ಕಲಿಸಿ ಸಮಾಜಕ್ಕೆ ಒಬ್ಬ ಒಳ್ಳೆ ವ್ಯಕ್ತಿಯನ್ನಾಗಿ ಕೊಡಲು ಒಬ್ಬ ಗುರುವಿಂದ ಮಾತ್ರ ಸಾಧ್ಯ. ಅಂತಹ ಗುರುವೇ ಹೇಳೋದೊಂದು ಮಾಡೋದೊಂದು ಮಾಡಿದ್ರೆ ಮಕ್ಕಳ ಭವಿಷ್ಯದ ಗತಿ ಏನು..? ಈಗೊಂದು ಪ್ರಶ್ನೆ ಯಾಕೆ ಮೂಡಿತು ಅಂದ್ರೆ, ಇಲ್ಲೊಂದು ಶಾಲಾ ಕಾಂಪೌಂಡ್ ಗಳ ಮೇಲೆ ವನ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಕಾಡು ಬೆಳೆಸಿ ನಾಡು ಉಳಿಸಿ, ವೃಕ್ಷ ಕಡಿದವನು ಭಿಕ್ಷೆ ಬೇಡಿದ.
ಹೀಗೇ ಹಲವಾರು ಪರಿಸರ ಸಂರಕ್ಷಣೆಯ ಸ್ಲೋಗನ್ ಗಳನ್ನು ಬರೆದಿದ್ದಾರೆ. ಆದರೆ ಕಾಂಪೌಂಡ್ ಪಕ್ಕದಲ್ಲಿರುವ ಸಾಲು ಸಾಲು ಮರಗಳನ್ನು ಕಡಿದು ಬೆಂಕಿ ಹಚ್ಚಲಾಗಿದೆ. ಈ ಕುರಿತ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗ್ತಿದ್ದು ನೆಟ್ಟಿಗರು ತರೇಹವಾರು ಕಾಮೆಂಟ್ ಮಾಡಿ ಶಾಲಾ ಆಡಳಿತ ಮಂಡಳಿ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದಾರೆ..