ಜಗತ್ತಿನ ಶ್ರೇಷ್ಠ ಕಾರ್ಯಗಳಲ್ಲಿ ಶಿಕ್ಷಕ ವೃತ್ತಿಯು ಅಗ್ರ ಸ್ಥಾನ ಪಡೆದಿದೆ. ಬಹುಕಾಲದಿಂದಲೂ ಗುರು-ಶಿಕ್ಷಕರ ಸಂಪ್ರದಾಯ ನಡೆದುಕೊಂಡು ಬಂದಿದ್ದು, ನಮ್ಮ ಪೋಷಕರು ನಮ್ಮ ಮೊದಲ ಗುರುಗಳಾಗಿರುತ್ತಾರೆ. ಏಕೆಂದರೆ ಅವರು ನಮಗೆ ಜಗತ್ತನ್ನು ತೋರಿಸಿದ್ದಾರೆ. ಅವರ ಸ್ಥಾನವನ್ನು ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಸಮತೆಯ ತತ್ವದ ಮೂಲಕ ಸಂವಿಧಾನದ ಆಶಯವನ್ನು ವಿದ್ಯಾರ್ಥಿಗಳಿಗೆ ಭೋದಿಸಿ ಸಾಮರಸ್ಯ ಮೂಡಿಸುವ ಶಿಕ್ಷಕರು ಸಹ ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದು ಅಕ್ಷರಶಃ ಸತ್ಯ.
ಆಧುನಿಕ ಯುಗದಲ್ಲಿ ನಾವು ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಕರಿಂದ ಸರಿಯಾದ ಜೀವನ ವಿಧಾನವನ್ನು ಪಡೆಯಬೇಕಿದೆ. ಅವರ ಮಾರ್ಗದರ್ಶನದಲ್ಲಿ ನಾವು ನಮ್ಮ ಯಶಸ್ಸನ್ನು ಸಾಧಿಸುತ್ತೇವೆ. ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು. ಶಿಕ್ಷಕರಿಗೆ ಯಾವಾಗಲೂ ಗೌರವದ ಮತ್ತು ಪ್ರೀತಿಯನ್ನು ನೀಡಬೇಕು. ಏಕೆಂದರೆ ಶಿಕ್ಷಕರು ನಮ್ಮನ್ನು ಯಶಸ್ಸಿನ ಹಾದಿಯಲ್ಲಿ ನಮ್ಮನ್ನು ಕಳುಹಿಸಲು ಪ್ರಯತ್ನಿಸುತ್ತಿರುತ್ತಾರೆ.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ಸೆಪ್ಟೆಂಬರ್ 5 ರಂದು. ಅವರನ್ನು ಸ್ಮರಿಸುವ ಮೂಲಕ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಇವರು ಎಲ್ಲರೂ ಪ್ರೀತಿಸುವ ಶಿಕ್ಷಕರಾಗಿದ್ದರು. ಈ ದಿನ ವಿಶ್ವಾದ್ಯಂತ ಶಿಕ್ಷಕರಿಗೆ ಗೌರವ ಸಲ್ಲಿಸುವ ದಿನವಾಗಿದೆ. ಶಾಲೆ, ಕಾಲೇಜುಗಳು ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಶಿಕ್ಷಕರ ದಿನಾಚರಣೆಯಂದು ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಾವು ಕಾಣಬಹುದು. ವಿದ್ಯಾರ್ಥಿಗಳು ಗುರುಗಳನ್ನು ವಿವಿಧ ರೀತಿಯಲ್ಲಿ ಗೌರವಿಸಿದರೆ, ಶಿಕ್ಷಕರು ಗುರು-ಶಿಷ್ಯ ಸಂಪ್ರದಾಯವನ್ನು ಎತ್ತಿಹಿಡಿಯುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ. ಭಾರತ ಸೇರಿದಂತೆ 21 ದೇಶಗಳಲ್ಲಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.

ಬೋಧಕರ ದಿನವು ಪ್ರತಿಯೊಬ್ಬರಿಗೂ ವಿಶೇಷವಾಗಿ ಬೋಧಕ ಮತ್ತು ವಿದ್ವಾಂಸರಿಗೆ ನಿಜವಾಗಿಯೂ ದೊಡ್ಡ ದಿನವಾಗಿದೆ. ಇದನ್ನು ವಿದ್ವಾಂಸರು ತಮ್ಮ ಶಿಕ್ಷಣ ತಜ್ಞರಿಗೆ ಗೌರವ ಸಲ್ಲಿಸಲು ವಾರ್ಷಿಕವಾಗಿ ಸೆಪ್ಟೆಂಬರ್ 5 ರಂದು ಆಚರಿಸುತ್ತಾರೆ. ಭಾರತದಲ್ಲಿಯೂ ಸಹ ಅಂದು ಶಿಕ್ಷಕರ ದಿನವೆಂದು ಘೋಷಿಸಲಾಗಿದೆ. ನಮ್ಮ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು 5 ಸೆಪ್ಟೆಂಬರ್ 1888 ರಂದು ಜನಿಸಿದರು. ಆದ್ದರಿಂದ ಅವರ ಶಿಕ್ಷಣ ವೃತ್ತಿಯ ಮೇಲಿನ ಪ್ರೀತಿ ಮತ್ತು ಪ್ರೀತಿಯ ಪರಿಣಾಮವಾಗಿ ಅವರ ಜನ್ಮದಿನದಂದು ಶಿಕ್ಷಕರ ದಿನವನ್ನು ಭಾರತದಾದ್ಯಂತ ವ್ಯಾಪಕವಾಗಿ ಕರೆಯಲಾಗುತ್ತದೆ.
ಬೋಧಕರ ದಿನವು ಪ್ರತಿಯೊಬ್ಬರಿಗೂ ವಿಶೇಷವಾಗಿ ಬೋಧಕ ಮತ್ತು ವಿದ್ವಾಂಸರಿಗೆ ನಿಜವಾಗಿಯೂ ದೊಡ್ಡ ದಿನವಾಗಿದೆ. ಇದನ್ನು ವಿದ್ವಾಂಸರು ತಮ್ಮ ಶಿಕ್ಷಣ ತಜ್ಞರಿಗೆ ಗೌರವ ಸಲ್ಲಿಸಲು ವಾರ್ಷಿಕವಾಗಿ ಸೆಪ್ಟೆಂಬರ್ 5ರ ಇಂದು ಆಚರಿಸುತ್ತಾರೆ. ಭಾರತದಲ್ಲಿಯೂ ಸಹ ಅಂದು ಶಿಕ್ಷಕರ ದಿನವೆಂದು ಘೋಷಿಸಲಾಗಿದೆ. ನಮ್ಮ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು 5 ಸೆಪ್ಟೆಂಬರ್ 1888 ರಂದು ಜನಿಸಿದರು, ಆದ್ದರಿಂದ ಅವರ ಶಿಕ್ಷಣ ವೃತ್ತಿಯ ಮೇಲಿನ ಪ್ರೀತಿ ಮತ್ತು ಪ್ರೀತಿಯ ಪರಿಣಾಮವಾಗಿ ಅವರ ಜನ್ಮದಿನದಂದು ಶಿಕ್ಷಕರ ದಿನವನ್ನು ಭಾರತದಾದ್ಯಂತ ವ್ಯಾಪಕವಾಗಿ ಕರೆಯಲಾಗುತ್ತದೆ.
ಇವರು ತರಬೇತಿಯಲ್ಲಿ ಉತ್ತಮ ಧರ್ಮವನ್ನು ಹೊಂದಿದ್ದರು ಮತ್ತು ಹೆಚ್ಚುವರಿಯಾಗಿ ವಿದ್ವಾಂಸ, ರಾಜತಾಂತ್ರಿಕ, ಬೋಧಕ ಮತ್ತು ಭಾರತದ ರಾಷ್ಟ್ರಪತಿಯಾಗಿ ಪ್ರಸಿದ್ದರಾಗಿ ಶಿಕ್ಷಣ ತಜ್ಞರು ಸಹ ಆಗಿದ್ದರು, ಅವರು ಭಾರತದ ಶಿಕ್ಷಣ ಮಟ್ಟವನ್ನು ಸುಧಾರಿಸಲು ಅನೇಕ ಕೆಲಸಗಳನ್ನು ಮಾಡಿದರು. ರಾಧಾಕೃಷ್ಣನ್ ಅವರಿಗೆ 1954 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವ ಅಂದರೆ ‘ಭಾರತ ರತ್ನ’ ನೀಡಲಾಯಿತು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಕೆಲವು ವಿದ್ಯಾರ್ಥಿಗಳು ಮತ್ತು ಸ್ನೇಹಿತರು ಒಮ್ಮೆ ಅವರ ಜನ್ಮದಿನ ವನ್ನು ಆಚರಿಸುವಂತೆ ಕೇಳಿಕೊಂಡರು ಎಂದು ಹೇಳಿದರು, ಅದಕ್ಕೆ ರಾಧಾಕೃಷ್ಣನ್ ಅವರು ನನ್ನ ಜನ್ಮದಿನವನ್ನು ಪ್ರತ್ಯೇಕ ವಾಗಿ ಆಚರಿಸುವ ಬದಲು ಶಿಕ್ಷಕರ ದಿನವಾಗಿ ಆಚರಿಸಿದರೆ ನನಗೆ ತುಂಬಾ ಹೆಮ್ಮೆಯಾಗುತ್ತದೆ. ಅಂದಿನಿಂದ ಭಾರತದಲ್ಲಿ ಶಿಕ್ಷಕರ ದಿನಾಚರಣೆ ಆರಂಭವಾಯಿತು.

ಗುರು ಶಿಕ್ಷಣವನ್ನು ನೀಡುವುದರ ಜೊತೆಗೆ ಶಿಕ್ಷಣದ ಮೂಲ ಅರ್ಥವನ್ನು ಪ್ರತಿಯೊಬ್ಬ ವ್ಯಕ್ತಿಯ ಬದುಕಲ್ಲಿ ಜ್ಞಾನವೆಂಬ ದೀಪವನ್ನು ಬೆಳಗುವನು. ಇಂದಿನ ಜನ ಮಾನಸದಲ್ಲಿ ವಿದ್ಯೆ ಎಂಬುದೇ ಬದಲಾದ ಹಾದಿಯಲ್ಲಿ ಸಾಗುತ್ತಿದೆ ಏನೋ ಗೊತ್ತಿಲ್ಲಮಕ್ಕಳಲ್ಲಿ ಕಲಿಕಾ ಮಟ್ಟದಲ್ಲಿ ಸತ್ಯ ಅಥವಾ ಕಲಿಕೆಯ ಮೇಲಿನ ನಿರಾಸಕ್ತಿಯು ತಿಳಿಯದು. ಶಿಕ್ಷಕನಿಗಿದ್ದ ಗೌರವ ದಿನದಿಂದ ದಿನಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ ಘಟನೆ ಸಹ ನೆಡೆದಿದೆ. ಮೊದಲೆಲ್ಲ ಗುರುವನ್ನು ಗುರುವೇ ಪರಬ್ರಹ್ಮ ಎಂಬ ಸ್ವರೂಪದಲ್ಲಿ ಕಾಣಲಾಗುತ್ತಿತ್ತು ಪ್ರಸ್ತುತ ಮುಂದುವರಿದ ಕಾಲಘಟ್ಟದಲ್ಲಿ ಈ ರೀತಿ ಇದು ಕಣ್ಮರೆ ಯಾಗುತ್ತಿದೆ. ಅಲ್ಲದೆ ಈ ಕಾಲದ ವಿದ್ಯಾರ್ಥಿಗಳ ಮನಸ್ಸು ಕಿನ್ನತೆಯೆಡೆಗೆ ಸಾಗುತ್ತಿರುವುದು ವಿಷಾದನೀಯ ಅಂಶವಾ ಗಿದೆ. ಪೂಜ್ಯ ಭಾವನೆಯಿಂದ ಕಂಡುಬಂದ ಕಾಲ ಸಾಗಿ ಒಬ್ಬಗುರು ಎಂದರೆ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ತಲುಪಿ ಸುವ ಒಂದು ಮಾಧ್ಯಮವಾಗಿ ರೂಪಗೊಂಡಿದ್ದಾನೆ.
ಒಟ್ಟಾರೆಯಾಗಿ ಹಿಂದೆ ‘ಚಡಿ ಚಡಿ ಚಂ ಚಂ ವಿದ್ಯಾ ಗಮ ಗಮ” ಎಂಬ ಶಿಕ್ಷೆಯಿಂದ ಶಿಕ್ಷಣವೆಂಬ ರೀತಿಯಲ್ಲಿತ್ತು . ಮೊದಲು ಏಟು ನಂತರ ವಿದ್ಯೆ ಗುರುಕುಲ ಪದ್ಧತಿ ಕಾಲದಲ್ಲಿ ಗುರುಗಳೆಲ್ಲ ವಿದ್ಯೆಯನ್ನು ಕಲಿಸಿಸುವ ಮೇಧಾವಿಗಳಾಗಿದ್ದರು. ಹೀಗೆ ದೇಶದ ಪ್ರಗತಿಗೆ ಶಿಕ್ಷಕನು “ಅಂಧಕಾರ’ವನ್ನು ದೂರಮಾಡಿ ಸುಜ್ಞಾನದ ಸನ್ಮಾರ್ಗವನ್ನು ತೋರುವ ವೈಚಾರಿಕತೆಯ ಬೀಜ ಬಿತ್ತುವ ಶಿಕ್ಷಕರ ಅಗತ್ಯತೆ ಇಂದಿನ ಆಧುನಿಕ ಸಮಾಜಕ್ಕೆ ತುರ್ತಾಗಿ ಬೇಕಿದೆ ಎಂದರೆ ತಪ್ಪಾಗಲಾರದು.
ಏನೇ ಇರಲಿ ಅಂದಿನ ಶಿಕ್ಷಣ ವ್ಯವಸ್ಥೆಗೆ ಹೋಲಿಸಿದರೆ ಇಂದಿನ ಶಿಕ್ಷಣ ವ್ಯವಸ್ಥೆ ಶಿಕ್ಷಣ ವ್ಯವಸ್ಥೆ ತಂತ್ರಜ್ಞಾನದೊಂದಿಗೆ ಬೆಸೆದುಕೊಂಡ ಯಂತ್ರವಾಗಿದ್ದು ವಿಪರ್ಯಾಸವೇ ಸರಿ.
-ಕಿರಣ್ ಕಾನ್ಮನೆ