ಹಾಸನ: ಮನೆಗೆ ತೆರಳುತ್ತಿದ್ದ ಬಾಲಕನ ಮೇಲೆ ಏಕಾಏಕಿ ಬೀದಿ ನಾಯಿಗಳು ಅಟ್ಯಾಕ್ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಸಕಲೇಶಪುರ ಪಟ್ಟಣದ ಕುಡುಗರಹಳ್ಳಿ ಬಡಾವಣೆಯಲ್ಲಿ ನಡೆದಿದೆ. ಶಾಹಿದ್ ಎಂಬ ಬಾಲಕನಿಗೆ ಮುಖ, ಕೈ, ಕಾಲು, ಹೊಟ್ಟೆ ಭಾಗಕ್ಕೆ ಕಚ್ಚಿ ಗಾಯಗಳೊಳಿಸಿವೆ. ಮದರಸದಿಂದ ಮನೆಗೆ ತೆರಳುವಾಗ ಶಾಹಿದ್ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಈ ವೇಳೆ ಶ್ವಾನಗಳಿಂದ ಬಿಡಿಸಿಕೊಳ್ಳಲು ಶಾಹಿದ್ ಹರಸಾಹಸಪಟ್ಟಿದ್ದಾನೆ. ಅಷ್ಟರಲ್ಲಿ ದೇಹದ ವಿವಿಧ ಭಾಗಗಳಿಗೆ ಕಚ್ಚಿ ಗಾಯಗೊಳಿಸಿವೆ. ಶಾಹಿದ್, ಕಿರುಚಾಟ ಶಬ್ದ ಕೇಳಿ ಸ್ಥಳೀಯರು ಬೀದಿ ನಾಯಿಗಳಿಂದ ಶಾಹಿದ್ ನನ್ನು ಬಚಾವ್ ಮಾಡಿದ್ದಾರೆ.
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಈ ಕುರಿತು ಪುರಸಭೆಗೆ ಮನವಿ ಸಲ್ಲಿಸಿದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.