ಸಿಲಿಕಾನ್ ಸಿಟಿಯನ್ನು ಬ್ರಾಂಡ್ ಬೆಂಗಳೂರು ಮಾಡಬೇಕೆನ್ನುವುದು ಡಿಕೆಶಿಯವರ ಕನಸಾಗಿತ್ತು. ಆ ಹಿನ್ನೆಲೆಯಲ್ಲಿ ಸಾಕಷ್ಟು ಸರ್ಕಸ್ ಮಾಡುತ್ತಿದ್ದಾರೆ. ಇದೀಗ ಡಿಕೆಶಿಯವರು ಬೆಂಗಳೂರಿಗೆ ಹಲವು ಹೊಸ ರೂಲ್ಸ್ಗಳನ್ನು ತಂದಿದ್ದಾರೆ.
ಇನ್ಮುಂದೆ ವಾಹನ ಸವಾರರು ಎಲ್ಲೆಂದರಲ್ಲಿ ವಾಹನಗಳನ್ನ ನಿಲ್ಲಿಸಬಾರದು. ನೋ ಪಾರ್ಕಿಂಗ್ ಇರುವ ಜಾಗದಲ್ಲಿ ವಾಹನಗಳನ್ನ ನಿಲ್ಲಿಸಿದರೆ ವಾಹನಗಳನ್ನು ವಶಕ್ಕೆ ಪಡೆದು 21 ದಿನದಲ್ಲಿ ಹರಾಜು ಮಾಡಲಾಗುತ್ತದೆ. ಜೊತೆಗೆ ಬೀದಿ ಬದಿ ವ್ಯಾಪಾರಿಗಳಿಗೂ ಕೂಡ ಹೊಸ ರೂಲ್ಸ್ ತಂದಿದ್ದಾರೆ. ಇನ್ಮುಂದೆ ಬೀದಿ ಬದಿ ವ್ಯಾಪಾರಿಗಳು ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ತಳ್ಳೋಗಾಡಿಯಲ್ಲೇ ವ್ಯಪಾರ ಮಾಡಬೇಕು ಜೊತೆಗೆ ಯಾವ ಜಾಗದಲ್ಲಿ ನಿಗದಿ ಪಡಿಸಿರುತ್ತಾರೋ ಅದೇ ಜಾಗದಲ್ಲಿ ಅವರು ಮಾರಾಟವನ್ನು ಮಾಡಬೇಕಾಗುತ್ತದೆ.
ಒಂದು ಕಡೆ ಪಾರ್ಕಿಂಗ್ ವಿಚಾರ ಒಳ್ಳೆಯದಾದರೆ, ಮತ್ತೊಂದು ಕಡೆ ಬೀದಿಬದಿಯ ವ್ಯಪಾರಿಗಳಿಗೆ ರೂಲ್ಸ್ ಮಾಡಿ ಡಿಕೆಶಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಯಾಕಂದರೆ, ಎಷ್ಟೋ ಜನ ಬೀದಿಬದಿ ವ್ಯಾಪಾರಿಗಳು ಹಲವು ವರ್ಷಗಳಿಂದ ವ್ಯಾಪಾರ ಮಾಡಿ ತಮ್ಮ ಜೀವನ ಸಾಗಿಸಿರುತ್ತಾರೆ. ಇದೀಗ ಏಕಾಏಕಿ ಅಂಗಡಿ ತೆರವು ಮಾಡಿ, ಹೊಸ ರೂಲ್ಸ್ ಫಾಲೋ ಮಾಡಬೇಕಂದ್ರೆ ಸ್ವಲ್ಪ ಕಷ್ಟ ಆಗುತ್ತೆ ಅನ್ನುವುದು ಜನರ ವಾದವಾಗಿದೆ.