ಹಾಸನ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತದಲ್ಲಿ ಮೃತರಾದ ಭೂಮಿಕ್ ಮನೆಗೆ ಸಂಸದ ಶ್ರೇಯಸ್ ಪಟೇಲ್ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೊಂದು ಕರಾಳ ದಿನ. 11 ಜನ ಅಭಿಮಾನಿಗಳ ಸಾವು ನೋವು ತಂದಿದೆ. ಯಾರಿಗೂ ಕೂಡ ಇಂತಹ ದುಸ್ಥಿತಿ ಬರಬಾರದು. ಅವರ ತಂದೆ ತಾಯಿಗೆ ಗೊತ್ತು ಅದರ ನೋವು. ಘಟನೆ ಬಗ್ಗೆ ಈಗಾಗಲೇ ತನಿಖೆಗೆ ಆದೇಶ ಮಾಡಲಾಗಿದೆ. ಈ ಘಟನೆಯಲ್ಲಿ ಯಾರ ತಪ್ಪಿದೆ ಯಾವ ಇಲಾಖೆಯಿಂದ ತಪ್ಪಾಗಿದೆ ಎಲ್ಲವು ಕೂಡ ತನಿಖೆಯಿಂದ ಹೊರ ಬರಲಿದೆ.
ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಆಗುತ್ತದೆ. ನಿನ್ನೆಯ ಘಟನೆಯ ಹಿನ್ನೆಲೆಯಲ್ಲಿ ಯೋಚನೆ ಮಾಡಿದರೆ. ಇಂಟಲಿಜೆನ್ಸ್ ಏನು ಮಾಡುತ್ತಿತ್ತು ಎನ್ನುವುದು ಅನುಮಾನ ಮೂಡುತ್ತಿದೆ ಎಂದಿದ್ದಾರೆ. ಹಿಂದಿನ ರಾತ್ರಿ ಪಂದ್ಯ ಗೆದ್ದಾಗ ಮರುದಿನ ಏನಾಗಬಹುದು ಎಂಬ ಮಾಹಿತಿ ಇರಲಿಲ್ಲವೇ? ಎಂದಿದ್ದಾರೆ.