ಚಿನ್ನಸ್ವಾಮಿ ಸ್ಟೇಡಿಯಂ ಗೇಟ್ ಬಳಿ ಬುಧವಾರ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಕೋರ್ಟ್, ನ್ಯಾಯಾಂಗ ಬಂಧನ ವಿಧಿಸಿದೆ. ಅರೆಸ್ಟ್ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು 41ನೇ ಎಸಿಎಂಎಂ ಕೋರ್ಟ್ ಎದುರು ಇಂದು ಹಾಜರು ಪಡಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್, ಜೂನ್ 19ರ ವರಗೆ ಆರೋಪಿಗಳನ್ನು ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ವಿಕ್ಟರಿ ಸೆಲೆಬ್ರೇಷನ್ಗೆ ಅಂತಾ ಬಂದು ಜೂನ್ 4 ರಂದು ಸ್ಟೇಡಿಯಂ ಬಳಿ 11 ಮಂದಿ ಆರ್ಸಿಬಿ ಅಭಿಮಾನಿಗಳು ಕಾಲ್ತುಳಿತಕ್ಕೆ ಬಲಿಯಾಗಿದ್ದರು. ಹೀಗಾಗಿ RCB ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸ್ಲೆ. ಡಿಎನ್ಎ ಡೈರೆಕ್ಟರ್ ಸುನೀಲ್ ಮ್ಯಾಥ್ಯೂ, ಮ್ಯಾನೇಜ್ಮೆಂಟ್ ಮ್ಯಾನೇಜರ್ ಕಿರಣ್, ಸಿಬ್ಬಂದಿ ಸುಮಂತ್ ಎಂಬುವವರನನು ಪೊಲೀಸರು ಅರೆಸ್ಟ್ ಮಾಡಿದ್ದರು. ನಂತರ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿತ್ತು.
ಆರೋಪಿಗಳ ಪರ ವಕೀಲ ಸುನೀಲ್ ವಾದ ಮಂಡಿಸಿದರು. ಸಿಎಂ ಆರೋಪಿಗಳನ್ನು ಅರೆಸ್ಟ್ ಮಾಡಿ ಅಂತಾ ಹೇಳಿದ ಬಳಿಕ ಬಂಧಿಸಲಾಗಿದೆ. ಹೀಗೆ ಅರೆಸ್ಟ್ ಮಾಡಿ ಎಂದು ಹೇಳುವುದೇ ಕಾನೂನು ಬಾಹಿರ. ಸರ್ಕಾರ ತನ್ನ ಇಮೇಜ್ ಕಾಪಾಡಲು ಈ ರೀತಿ ಮಾಡಿದೆ. ಕಾರ್ಯಕ್ರಮವನ್ನು ಸಂಪೂರ್ಣವಾಗಿ, ಸುರಕ್ಷಿತವಾಗಿ ಸಂಘಟಿಸದೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಾದಿಸಿದರು.
ಈ ವೇಳೆ ನ್ಯಾಯಾಧೀಶರು, ಸಂಭ್ರಮಿಸಲು ನಿಮಗೆ ಅನುಮತಿ ಇತ್ತಾ ಎಂದು ಪ್ರಶ್ನಿಸಿದ್ದಾರೆ. ಆಗ ಆರೋಪಿಗಳ ಪರ ವಕೀಲರು, ಚಿನ್ನಸ್ವಾಮಿ ಸ್ಟೇಡಿಯಂ ಮತಗ್ತು ವಿಧಾನಸೌಧದಲ್ಲಿ ಸಂಭ್ ಆಚರಿಸಲು ನಿರ್ಧಾರ ಮಾಡಿದ್ದೇ ಸರ್ಕಾರ. ಕ್ರೀಡಾಂಗಣದಲ್ಲಿ ಏನಾದರೂ ಸಣ್ಣ ತೊಂದರೆ ಆಗಿದ್ದರೂ ಅದು ಇವೆಂಟ್ ಮ್ಯಾನೇಜ್ಮೆಂಟ್ ಜವಾಬ್ದಾರಿ ಆಗುತ್ತದೆ. ಆದರೆ, ಇಲ್ಲಿ ಅಂತಹುದು ಏನೂ ಆಗಿಲ್ಲ ಎಂದಿದ್ದಾರೆ.
ಕಾಲ್ತುಳಿತ ಆಗಿರುವುದು ರಸ್ತೆಯಲ್ಲಿ. ಇದರ ಜವಾಬ್ದಾರಿ ಪೊಲೀಸರದ್ದು. ಮೆರವಣಿಗೆ ಮಾಡಲು ಕೆಎಸ್ಸಿಎ ಸರ್ಕಾರಕ್ಕೆ ಅನುಮತಿ ಕೇಳಿತ್ತು. ಅದರೆ ಅದಕ್ಕೆ ಪರ್ಮಿಷನ್ ಕೊಟ್ಟಿಲ್ಲ. ಜೂನ್ 3ರಂದು ಪೊಲೀಸರು ರಾತ್ರಿಯೆಲ್ಲ ಕೆಲಸ ಮಾಡಿದ್ದಾರೆ. ಹೀಗಾಗಿ ವಿಕ್ಟರಿ ಯಾತ್ರೆಗೆ ಅನುಮತಿ ನೀಡಲ್ಲ ಅಂತಾ ಪೊಲೀಸ್ ಇಲಾಖೆ ಹೇಳಿತ್ತು. ವಿಜಯೋತ್ಸವ ಯಾತ್ರೆಗೆ ಅನುಮತಿ ನಿರಾಕರಿಸಿದರೆ ಈ ಘಟನೆ ಆಗುತ್ತಿರಲಿಲ್ಲ ಎಂದರು. ವಾದ-ವಿವಾದ ಆಲಿಸಿದ ಕೋರ್ಟ್ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.