ಗದಗ: ಜನಿವಾರ ಸನಾತನ ಧರ್ಮದ ಪರಂಪರೆ. ಹಿಂದೂ ಧರ್ಮದ ಬಗ್ಗೆ ಗೊತ್ತಿಲ್ಲದವರೂ ಇರುತ್ತಾರೆ. ಆದರೆ, ಈ ಘಟನೆಯನ್ನು ಪ್ರತಿಯೊಬ್ಬರೂ ಖಂಡಿಸಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸ್ಕಾರವೇ ಗೊತ್ತಿಲ್ಲದ ವ್ಯಕ್ತಿಗಳು ಇರುತ್ತಾರೆ. ಯಾರೂ ಶೂದ್ರರು, ಕ್ಷತ್ರಿಯರೂ ಎಂಬುವುದು ಸಹ ತಿಳಿದಿಲ್ಲ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕಿಡಿಕಾರಿದ್ದಾರೆ.
ಜಾತಿ ಗಣತಿ ವಿಚಾರವಾಗಿ ಮಾತನಾಡಿದ ಅವರು, ಬೇರೆ ಧರ್ಮದ ಬಗ್ಗೆ ನಾನು ಟೀಕೆ ಮಾಡುವುದಿಲ್ಲ. ಎಲ್ಲರೂ ಸಮಾನತೆ ದೃಷ್ಟಿಯಿಂದ ನಡೆಯಬೇಕು ಎಂದು ಭಾವಿಸುತ್ತೇನೆ. ಅವರ ಸ್ವಾರ್ಥಕ್ಕೋಸ್ಕರ ರೂಲ್ಸ್ ಗಳು ಬಳಕೆಯಾಗಬಾರದು. ಹತ್ತು ವರ್ಷಗಳ ಹಿಂದೆ ಕಾಂತಾರಾಜ್ ವರದಿ ಸಿದ್ಧವಾಗಿದೆ. ಇವತ್ತು ಪುನಃ ಲಿಂಗಾಯತರಲ್ಲಿ ಎರಡು ಮೂರು ಪಂಗಡಗಳನ್ನಾಗಿ ಮಾಡಿದ್ದಾರೆ. ಹಿಂದೂ ಸಮಾಜದಲ್ಲಿ ಎಲ್ಲಾ ಸಮಾಜದಲ್ಲಿ ಒಳಪಂಗಡಗಳನ್ನು ಮಾಡಿದ್ದಾರೆ.
ಅವರ ಸ್ವಾರ್ಥಕ್ಕೆ ಒಂದು ಸಮುದಾಯವನ್ನು ಓಲೈಕೆ ಮಾಡಲು ಹೊರಟಿದ್ದಾರೆ. ಒಂದು ಸಮುದಾಯವನ್ನು ಬಹಳ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ ಎಂಬುವುದನ್ನು ಬಿಂಬಿಸಲು ಸರ್ಕಾರ ಹೊರಟಿದೆ. ಅವರನ್ನು ಓಲೈಕೆ ಮಾಡಿದ್ದಾರೆಯೋ? ಅಥವಾ ಎನೂ ಎಂಬುವುದನ್ನು ತಿಳಿಸಬೇಕು. ಹೀಗಾಗಿ ಎಲ್ಲರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಈ ವರದಿ ತಿರಸ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ.