ಮೈಸೂರು: ಮೈಸೂರು ಜಿಲ್ಲೆಯ ತಲಕಾಡು ತಾಲೂಕಿನಲ್ಲೊಬ್ಬ ಭತ್ತದ ಪೈರಿಗೆ ಕಿಡಿಗೇಡಿಗಳು ಕಳೆನಾಶಕ ಸಿಂಪಡಣೆ ಮಾಡಿ ಹಾನಿಗೊಳಿಸಿದ ಘಟನೆ ನಡೆದಿದೆ.
ತಲಕಾಡು ಪ್ರದೇಶದ ರೈತ ದಿನೇಶ್ ಅವರು ಭತ್ತದ ಬೆಳೆ ಬೆಳೆಸಲು ನಾಟಿ ಮಾಡಲು ಸಿದ್ಧಪಡಿಸಿದ್ದ ಪೈರಿಗೆ ಕಿಡಿಗೇಡಿಗಳು ಕಳೆನಾಶಕ ಸಿಂಪಡಣೆ ಮಾಡಿದ್ದಾರೆ. ಇದರಿಂದ ನಾಟಿಗೆ ರೆಡಿಯಾಗಿದ್ದ ಪೈರು ಸಂಪೂರ್ಣ ಹಾನಿಗೊಂಡಿದ್ದು, ರೈತನಿಗೆ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ.
ಘಟನೆಯ ಬಗ್ಗೆ ರೈತ ದಿನೇಶ್ ತಲಕಾಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ವಿಧಾನಸೌಧದ ಮುಂಭಾಗ ಕೈ ಕೈ ಮಿಲಾಯಿಸಿದ ಹುಡುಗಿಯರು | ನಡುರಸ್ತೆಯಲ್ಲೇ ಜಡೆ ಜಗಳ



















