ಮಂಗಳೂರು : ಧರ್ಮಸ್ಥಳದಲ್ಲಿ ಬುರುಡೆ ಕೇಸ್ ಸಂಬಂಧ ಕೋರ್ಟ್ ಗೆ ಪ್ರಾಥಮಿಕ ತನಿಖೆ ವರದಿ ಸಲ್ಲಿಕೆಯಾಗಿದೆ. ಆ ವರದಿಯಲ್ಲಿ ಮಹೇಶ್ ಶೆಟ್ಟಿ ತಿಮ್ಮರೋಡಿ ಮತ್ತು ತಂಡ ರೂಪಿಸಿದ್ದ ಕ್ರಿಮಿನಲ್ ಪಿತೂರಿಯ ಬಗ್ಗೆ ಉಲ್ಲೇಖ ಮಾಡಿದ್ದು, ಕಳಂಕ ಮೆತ್ತಲು ಮುಂದೆ ಬಂದವರೇ ಬೆತ್ತಲಾಗಿದ್ದಾರೆ.
ಧರ್ಮಸ್ಥಳದ ವಿರುದ್ಧ ಕೇಳಿ ಬಂದಿದ್ದ ಆರೋಪ ಬುರುಡೆ ಗ್ಯಾಂಗ್ ಷಡ್ಯಂತರ ಎಂಬುದು ಎಸ್ ಐಟಿ ತನಿಖೆಯಲ್ಲಿ ಸಾಬೀತಾಗಿದೆ. ಧರ್ಮಸ್ಥಳದ ತೇಜೋವಧೆ ಮಾಡಲೆಂದೇ ನಡೆಸಿದ ಕಪಟ ನಾಟಕದಲ್ಲಿ ಮಹೇಶ್ ತಿಮರೋಡಿ ಸೇರಿದಂತೆ ಚಿನ್ನಯ್ಯ,ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ, ಟಿ ಜಯಂತ್ ಹಾಗೂ ಸುಜಾತಾ ಭಟ್ ಆರು ಜನರ ಕೂಟವೇ ಸೂತ್ರದಾರರು ಎನ್ನುವುದು ಸಹ ಸಾಬೀತಾಗಿದೆ. ಧರ್ಮಸ್ಥಳವನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಈ ಆರೋಪಿಗಳು ಧರ್ಮಸ್ಥಳಕ್ಕಿರೋ ಹೆಸರು, ನಂಬಿಕೆಗೆ ಕಳಂಕ ತರಲು ಆ ಆರು ಜನ ಪಿತೂರಿ ಮಾಡಿ ಅಪರಾಧದಲ್ಲಿ ಶಾಮೀಲಾಗಿದ್ದಾರೆ ಎಂದು ಎಸ್ಐಟಿ ವರದಿಯಲ್ಲಿ ಉಲ್ಲೇಖಿಸಿದೆ.
ಇನ್ನು ಬುರುಡೆ ಪ್ರಕರಣದಲ್ಲಿ ಸುಳ್ಳು ದೂರು ದಾಖಲಿಸಿದ್ದ ಚಿನ್ನಯ್ಯನ ವಿಚಾರಣೆ, ಸಾಕ್ಷಿದಾರ ಪ್ರದೀಪ್ ಹೇಳಿಕೆ ಸೇರಿದಂತೆ ಆರೋಪಿಗಳ ಬ್ಯಾಂಕ್ ಡಿಟೇಲ್ಸ್ ಹಾಗೂ ಪ್ರಕರಣ ಸಂಬಂಧಿಸಿದಂತ ಸಾಕ್ಷಯಾಧಾರಗಳು, ಡಿಜಿಜಲ್ ಸಾಕ್ಷಿ ಹಾಗೂ ಮೆಡಿಕಲ್ ವರದಿಗಳನ್ನು ಕಲೆಹಾಕಿರುವ ಎಸ್ಐಟಿ ಬುರುಡೆ ಪ್ರಕರಣದಲ್ಲಿ ಆರು ಆರೋಪಿಗಳನ್ನು ಉಲ್ಲೇಖಿಸಿದ್ದಾರೆ.
6 ಆರೋಪಿಗಳ ಪಾತ್ರಗಳಾವುವು?
ಚಿನ್ನಯ್ಯ: ಆಮಿಷೆಗೊಳಗಾಗಿ ಸುಳ್ಳು ದೂರು ನೀಡಿದ್ದ ಚಿನ್ನಯ್ಯ. ಹಣ ಪಡೆದು ಬುರುಡೆ ಕಥೆ ಬಿಟ್ಟಿದ್ದ ಚಿನ್ನಯ್ಯ. ನಾನೇ ನೂರಾರು ಶವಗಳನ್ನ ಹೂತಿಟ್ಟಿರೋ ಬಗ್ಗೆ ಸುಳ್ಳೇಳಿ ದೂರು ನೀಡಿದ್ದ..
ಪಿತೂರಿ ವ್ಯೂಹದಲ್ಲಿ ಎ1 ಚಿನ್ನಯ್ಯ
1.ಚಿನ್ನಯ್ಯನಿಗೆ ವಿಠ್ಠಲಗೌಡ ಮೊದಲಿಂದ ಪರಿಚಿತ
2.ಮಹೇಶ್ ತಿಮರೋಡಿ ಮನೆಗೆ ಚಿನ್ನಯ್ಯನನ್ನು ಕರೆದೊಯ್ದಿದ್ದ ವಿಠ್ಠಲಗೌಡ
3.ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಒಳಸಂಚು
4.ಸಂಚಿನ ಸಭೆಯಲ್ಲಿ ಗಿರೀಶ್ ಮಟ್ಟಣ್ಣನವರ್,ಜಯಂತ್,ವಿಠ್ಠಲಗೌಡ ಭಾಗಿ
5.ಧರ್ಮಸ್ಥಳ ಮೇಲ್ವಿಚಾರಕರ ವಿರುದ್ಧ ನಡೆಸಿದ್ದ ಪಿತೂರಿ ಪ್ಲ್ಯಾನ್
6.ನೂರಾರು ಶವ ಹೂತಿರುವುದಾಗಿ ಚಿನ್ನಯ್ಯನಿಂದ ಸುಳ್ಳು ಹೇಳಿಸಿದ ಗ್ಯಾಂಗ್
7.ಚಿನ್ನಯ್ಯನ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಟಿ ಗ್ಯಾಂಗ್.
8.ತಲೆ ಬುರುಡೆಯೊಂದನ್ನು ಚಿನ್ನಯ್ಯನಿಗೆ ಕೊಟ್ಟು ಪೊಲೀಸರಿಗೆ ದೂರು ಕೊಡಿಸಿದ್ದರು
9.ನ್ಯಾಯಾಧೀಶರ ಮುಂದೆ ಚಿನ್ನಯ್ಯ ಹೇಳಿಕೆ ಕೊಡುವಂತೆ ಪ್ರೇರೇಪಿಸಿದ್ದರು
10. ಚಿನ್ನಯ್ಯ ಇವರಿಂದ ಹಣ ಪಡೆದು ಸುಳ್ಳು ಹೇಳಿರೋದು ತನಿಖೆಯಲ್ಲಿ ಬೆಳಕಿಗೆ
11. ಧರ್ಮಸ್ಥಳದ ಮೇಲ್ವಿಚಾರಕರ ವಿರುದ್ಧ ಚಿನ್ನಯ್ಯ ಸುಳ್ಳು ಹೇಳಿದ್ದಾನೆ.
12. ಅಪರಿಚಿತ ಶವ ಅದರಲ್ಲೂ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯ ಶವಗಳನ್ನು ಹೂತಿರೋದಾಗಿ ಸುಳ್ಳು ಹೇಳಿದ್ದಾನೆ.
13. ತಲೆ ಬುರುಡೆಯೊಂದನ್ನು ತಂದು ತಾನೇ ಹೂತಿದ್ದ ತಲೆ ಬುರುಡೆ ಎಂದು ಸುಳ್ಳು ನುಡಿದಿದ್ದಾನೆ.
14. ಹಣದ ಆಮಿಷ ಹಾಗೂ ಬೆದರಿಕೆಗೆ ಒಳಪಟ್ಟು ಈ ರೀತಿ ಸುಳ್ಳು ನುಡಿದಿದ್ದಾನೆ..
15. ಸುಳ್ಳು ದೂರು ಕೊಟ್ಟಿರುವುದಲ್ಲದೇ ನ್ಯಾಯಾಧೀಶರ ಮುಂದೆಯೂ ಸುಳ್ಳು ಕಥೆ ಕಟ್ಟಿದ್ದಾನೆ.
16. ಚಿನ್ನಯ್ಯ ಮಾಡಿದ ಆರೋಪಗಳೆಲ್ಲವೂ ಸತ್ಯಕ್ಕೆ ದೂರ ಎಂಬುದು ಎಸ್ ಐಟಿ ತನಿಖೆಯಿಂದ ತಿಳಿದು ಬಂದಿರುತ್ತದೆ..
17.ಇದೇ ಕಾರಣಕ್ಕೆ ಚಿನ್ನಯ್ಯನ ವಿರುದ್ಧ ಎಫ್ ಐಆರ್ ದಾಖಲಿಸಿ ಬಂಧನಕ್ಕೊಳಪಡಿಸಲಾಗಿದೆ…
ಮಹೇಶ್ ಶೆಟ್ಟಿ ತಿಮರೋಡಿ.
ಧರ್ಮಸ್ಥಳ ವಿರುದ್ಧದ ಸಂಚಿನ ರೂವಾರಿ
1.ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲೇ ಒಳಸಂಚು
2.ಧರ್ಮಸ್ಥಳ ವಿರುದ್ಧ ಸುಳ್ಳು ಆರೋಪ ಮಾಡುವ ದುರುದ್ದೇಶ
3.ಚಿನ್ನಯ್ಯನಿಗೆ ಆಮಿಷವೊಡ್ಡಿ ದೂರು ಕೊಡಿಸಿರುವ ಆರೋಪ
4.ಯಾವುದೋ ತಲೆಬುರುಡೆಯನ್ನು ಚಿನ್ನಯ್ಯನೇ ಹೂತಿದ್ದ ಬುರುಡೆ ಎಂದು ಬಿಂಬಿಸುವ ಪ್ರಯತ್ನ
5.ಅನನ್ಯ ಭಟ್ ಪಾತ್ರ ಸೃಷ್ಟಿಯಿಂದೆ ತಿಮರೋಡಿ ಕೈವಾಡ
6.ಸುಜಾತಾ ಭಟ್ ಜೊತೆ ಸೇರಿ ಧರ್ಮಸ್ಥಳದ ವಿರುದ್ಧ ಪಿತೂರಿ
7.ತಿಮರೋಡಿ ಮಾತು ಕೇಳಿ ಮಗಳು ಕಾಣೆಯಾಗಿದ್ದಾಳೆಂದು ದೂರು ಕೊಟ್ಟಿದ್ದ ಸುಜಾತ ಭಟ್
8.ಕಪಟ ಕಾರ್ಯತಂತ್ರದ ರೂವಾರಿಯೇ ತಿಮರೋಡಿ ಎಂದು ತನಿಖೆಯಿಂದ ಸಾಬೀತು
9.ತಿಮರೋಡಿ ಕೃತ್ಯದ ಬಗ್ಗೆ ವಿವರವಾಗಿ ಉಲ್ಲೇಖಿಸಿರುವ ಎಸ್ ಐಟಿ…
ಗಿರೀಶ್ ಮಟ್ಟಣ್ಣನವರ್ ಸಂಚು..
1.ವಿಠಲ್ ಗೌಡನಿಂದ ಬಂಗ್ಲೆಗುಡ್ಡದಿಂದ ತಲೆ ಬುರುಡೆ ತರಿಸಿಕೊಂಡಿದ್ದ ಮಟ್ಟಣ್ಣನವರ್
2.ಬೆಂಗಳೂರಿನ ಅಪಾರ್ಟ್ ಮೆಂಟ್ ನ ಸೆಕ್ಯೂರಿಟಿ ಗಾರ್ಡ್ ರೂಮಿನಲ್ಲಿ ಬುರುಡೆ ಇಟ್ಟಿದ್ದ ಮಟ್ಟಣ್ಣನವರ್..
3.ನಂತರ ತಲೆ ಬುರುಡೆಯನ್ನು ಜಯಂತ್ ಗೆ ಕೊಟ್ಟು ದೆಹಲಿಗೆ ತರಿಸಿಕೊಂಡಿದ್ದ ಆರೋಪ.
4.ತಲೆ ಬುರುಡೆ ಸಮೇತ ಸುಪ್ರೀಂ ಕೋರ್ಟ್ ಗೆ ದೂರು ಕೊಡಲು ಪ್ರಯತ್ನ
5.ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಅದೇ ಬುರುಡೆಯನ್ನು ತಿಮರೋಡಿ ಮನೆಗೆ ತರಿಸಿದ್ದ ಆರೋಪ.
6.ಚಿನ್ನಯ್ಯನಿಗೆ ಸುಳ್ಳು ದೂರು ನೀಡುವಂತೆ ಹಣ ಕೊಟ್ಟಿರುವ ಆರೋಪ
7. ಸುಳ್ಳು ದೂರು ಕೊಡಿಸುವುದರಲ್ಲಿ ಗಿರೀಶ್ ಮಟ್ಟಣ್ಣನವರ್ ಪಾತ್ರ ದೊಡ್ಡದು
8.ಸುಜಾತಾ ಭಟ್ ಮಗಳ ಕಥೆ ಸೃಷ್ಟಿ ಹಿಂದೆಯೂ ಮಟ್ಟಣನವರ್ ಕೈವಾಡವಿದೆ..
ವಿಠ್ಠಲ ಗೌಡ , ಜಯಂತ್ ಟಿ ರೋಲ್ ..
1.ಈ ಇಬ್ಬರೂ ಸಂಚಿನ ಭಾಗವೇ ಆಗಿರುತ್ತಾರೆ.
2.ಬಂಗ್ಲೆ ಗುಡ್ಡೆಯಿಂದ ತಲೆ ಬುರುಡೆ ತಂದಿದ್ದೇ ವಿಠ್ಠಲ ಗೌಡ
3. ಅದನ್ನ ಗಿರೀಶ್ ಮಟ್ಟಣ್ಣನವರ್ ಗೆ ಕೊಟ್ಟಿದ್ದು ವಿಠಲಗೌಡ
4.ಚಿನ್ನಯ್ಯನನ್ನು ತಿಮರೋಡಿ ಮನೆಗೆ ಕರೆ ತಂದಿದ್ದೇ ವಿಠ್ಠಲಗೌಡ
5. ಮಟ್ಟಣ್ಣನವರ್ ಆದೇಶದಂತೆ ತಲೆ ಬುರುಡೆಯನ್ನು ತನ್ನ ಮನೆಯಲ್ಲಿಟ್ಟಿದ್ದ ಜಯಂತ್
6.ಬುರುಡೆಯನ್ನು ರೈಲಿನಲ್ಲಿ ದೆಹಲಿಗೆ ಕೊಂಡೊಯ್ದಿದ್ದ ಜಯಂತ್
7..ಧರ್ಮಸ್ಥಳದ ವಿರುದ್ಧ ಒಳಸಂಚಿನಲ್ಲಿ ಜಯಂತ್ ನೇರ ಭಾಗಿ
8.ಅನನ್ಯ ಭಟ್ ಪಾತ್ರ ಸೃಷ್ಟಿಸಿ ಕಥೆ ಕಟ್ಟಿದ್ದ ಸುಜಾತ ಭಟ್
9.. ಸುಜಾತ ಭಟ್ ಈ ಪ್ರಕರಣದಲ್ಲಿ ಎ6
ಸದ್ಯ ಈ ಮಾಹಿತಿ ಕೋರ್ಟ್ ಸಲ್ಲಿಕೆ ಮಾಡಿರೋ ಪ್ರಾಥಮಿಕ ವರದಿಯಲ್ಲಿ ಉಲ್ಲೇಖವಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಉಳಿದ ಆರೋಪಿಗಳ ಪಿತೂರಿ ಬೆಳಕಿಗೆ ಬರಲಿದ್ದು, ಆರೋಪಿಗಳು ತನಿಖೆಗೆ ಸಹಕರಿಸ್ತಿಲ್ಲ. ಅದರ ಜೊತೆಗೆ ಕೆಲ ಟೆಕ್ನಿಕಲ್ ಎವಿಡೆನ್ಸ್ ಗಳ ವರದಿ ಬರಬೇಕಿದ್ದು, ಅಂತಿಮ ವರದಿಯಲ್ಲಿ ಸಲ್ಲಿಕೆ ಮಾಡಲಾಗುವುದೆಂದು ಕೋರ್ಟ್ ಗೆ ಮಾಹಿತಿ ನೀಡಿರೋ ಎಸ್ಐಟಿ. ಧರ್ಮಸ್ಥಳ ಮೇಲ್ವಿಚಾರಕರಿಗೆ ಪ್ರಾಥಮಿಕ ತನಿಖಾ ವರದಿಯಲ್ಲಿ ಕ್ಲೀನ್ ಚಿಟ್ ನೀಡಿದೆ.
ಇದನ್ನೂ ಓದಿ : ಚಿಕ್ಕಮಗಳೂರಿನ ಸಂರಕ್ಷಿತಾರಣ್ಯದ ಅಂಚಿನಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷ



















