ಮೈಸೂರು | ರಾಜ್ಯದಲ್ಲಿ ಸಿದ್ದರಾಮಯ್ಯ 5 ವರ್ಷವೂ ಸಿಎಂ ಆಗಿರುತ್ತಾರೆ. ಸಿದ್ದರಾಮಯ್ಯ ನವರು 5 ವರ್ಷವಲ್ಲ ಮುಂದಿನ 15 ವರ್ಷದವರೆಗೂ ಅವರೇ ಸಿಎಂ ಆಗಿರಬೇಕು ಎಂದು ಶಾಸಕ ಕೆ ಹರೀಶ್ ಗೌಡ ಎಂದಿದ್ದಾರೆ.
ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕ ಕೆ. ಹರೀಶ್ ಗೌಡ ವರದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ನಲ್ಲಿ ಯಾವುದೇ ಬಣಗಳಿಲ್ಲ, ನಾವು ಸಿದ್ದರಾಮಯ್ಯ, ಡಿಕೆಶಿ ಇಬ್ಬರ ಪರವು ಇದ್ದೇವೆ. ಪ್ರವಾಸ ತೆರಳುವ ಬಗ್ಗೆ ನನಗೆ ಆಹ್ವಾನ ಬಂದಿಲ್ಲ. ಆದರೆ ಪ್ರವಾಸ ಹೋಗುವುದು ಸರ್ವೆ ಸಾಮಾನ್ಯವಾದ ವಿಷಯ. 6ತಿಂಗಳ ಹಿಂದೆ ನಾವು ಸಹ ಕೆಲ ಶಾಸಕರ ಜೊತೆ ವಿದೇಶ ಪ್ರವಾಸ ಕೈಗೊಂಡಿದ್ದೆ, ಅದರಲ್ಲೇನು ತಪ್ಪಿಲ್ಲ ಎಂದಿದ್ದಾರೆ.
ಸಿಎಂ ಬದಲಾವಣೆ ವಿಚಾರದಲ್ಲಿ ಹೈ ಕಮಾಂಡ್ ಹೇಳಿದ ಹಾಗೆ ಎಂದು ಸಿಎಂ ಹೇಳಿದ್ದಾರೆ. ಅವರೇ ಹೇಳಿದ ಮೇಲೆ ನಮ್ಮದೇನು ಇಲ್ಲ. ನಮ್ಮ ಹೈ ಕಮಾಂಡ್ ನಲ್ಲಿ ಹಿರಿಯರಿದ್ದಾರೆ ಅವರು ತೀರ್ಮಾನ ಮಾಡಲಿದ್ದಾರೆ. ಸಿದ್ದರಾಮಯ್ಯ ನವರೇ ಸಿಎಂ ಆಗಿ ಮುಂದುವರಿಯಬೇಕು ಎನ್ನುವ ಆಸೆ ನನಗಿದೆ. ಹಾಗೆಯೇ ಡಿಕೆಶಿಯವರು ಸಹ ಸಿಎಂ ಆಗುತ್ತಾರೆ. ಕಾಂಗ್ರೆಸ್ ನಲ್ಲಿ ಎಲ್ಲರಿಗೂ ಅವಕಾಶ ಸಿಗಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಯಾವ ಪುರುಷಾರ್ಥಕ್ಕೆ ಕಾಂಗ್ರೆಸ್ ಸರ್ಕಾರ ಸಾವಿರ ದಿನಗಳ ಸಮಾವೇಶ ಮಾಡ್ತಿದೆ? | ಆರ್.ಅಶೋಕ್ ಕಿಡಿ



















