ವಿಜಯಪುರ: ಸಚಿವ ಶಿವಾನಂದ ಪಾಟೀಲ್ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಧ್ಯೆ ನಡೆಯುತ್ತಿರುವ ವಾಕ್ಸಮರ ಮುಂದುವರೆದಿದೆ.
ಯತ್ನಾಳ್ ಸವಾಲು ಸ್ವೀಕರಿಸಿದ್ದ ಸಚಿವ ಶಿವಾನಂದ್ ಪಾಟೀಲ್ ಸಭಾಪತಿಯವರಿಗೆ ರಾಜೀನಾಮೆ ಸಲ್ಲಿಸಿದ್ದರು. ಷರತ್ತು ವಿಧಿಸಿ ರಾಜೀನಾಮೆ ಸಲ್ಲಿಸಿದ್ದರಿಂದಾಗಿ ಅದು ಅಂಗೀಕಾರವಾಗಿರಲಿಲ್ಲ. ಇದಕ್ಕೆ ಮತ್ತೆ ಯತ್ನಾಳ್ ಲೇವಡಿ ಮಾಡಿದ್ದರು.

ಈಗ ಶಿವಾನಂದ್ ಪಾಟೀಲ್ ಮತ್ತೊಂದು ಸವಾಲು ಹಾಕಿದ್ದಾರೆ. ಈಗಲೂ ನಾನು ರಾಜೀನಾಮೆ ನೀಡಲು ಸಿದ್ದ. ಯತ್ನಾಳ್ ರಾಜೀನಾಮೆ ನೀಡುತ್ತಾರಾ? ಎಂದು ಸಚಿವ ಶಿವಾನಂದ ಪಾಟೀಲ್ ಮರು ಸವಾಲು ಹಾಕಿದ್ದಾರೆ. ನಾನು ಬರೀ ಲೇಟರ್ ಹೆಡ್ ನಲ್ಲಿ ಕೇವಲ ಸಹಿ ಮಾಡಿಕೊಡುತ್ತೇನೆ. ನೀವೆ ರಾಜೀನಾಮೆ ವಿಷಯ ಬರೆಯಿರಿ. ಹಾಗೆಯೇ ಯತ್ನಾಳ್ ರಾಜೀನಾಮೆ ನೀಡಬೇಕು. ಇಬ್ಬರ ರಾಜೀನಾಮೆ ಪತ್ರ ಸಭಾಪತಿಗಳಿಗೆ ನೀಡೋಣ. ಸಭಾಪತಿಗಳು ಬೇಕಾದರೆ ಮೊದಲು ನನ್ನ ರಾಜೀನಾಮೆಯನ್ನು ಅಂಗೀಕಾರ ಮಾಡಿ ನಂತರ ಯತ್ನಾಳ್ ರಾಜೀನಾಮೆ ಅಂಗೀಕಾರ ಮಾಡಲಿ. ಯತ್ನಾಳ್ ಸವಾಲು ಸ್ವೀಕಾರ ಮಾಡಿದ್ದೇನೆ ಈಗಲೂ ನಾನು ರಾಜೀನಾಮೆಗೆ ಭದ್ದ ಎಂದು ಸವಾಲು ಹಾಕಿದ್ದಾರೆ.