ದಾವಣಗೆರೆ: ರೌಡಿ ಶೀಟರ್ ಸಂತೋಷ್ ಅಲಿಯಾಸ್ ಕಣುಮ ಕೊಲೆ ಕೇಸ್ ವಿಚಾರವಾಗಿ, ಪೋಲೀಸರು ತನಿಖೆಯನ್ನು ಈಗಾಗಲೇ ಚುರುಕುಗೊಳಿಸಿದ್ದು, ಬಂಧಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಕಳೆದ ವಾರವಷ್ಟೆ ದಾವಣಗೆರೆ ರೌಡಿಶೀಟರ್ ಕಣುಮನನ್ನು ಹಾಡುಹಗಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆಯಾಗಿ ಮೂರು ದಿನದ ನಂತರ ಹೊಳಲ್ಕೆರೆ ಪೊಲೀಸ್ ಠಾಣೆಗೆ 10 ಜನ ಆರೋಪಿಗಳು ಶರಣಾಗಿದ್ದರು. ಇದೀಗ ಮತ್ತೆ 10 ಆರೋಪಿಗಳನ್ನ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದಾವಣಗೆರೆ ಎಸ್ ಪಿ ಉಮಾಪ್ರಶಾಂತ್ ಇದೇ ವಿಚಾರವಾಗಿ ಇಂಚಿಂಚೂ ಮಾಹಿತಿ ಹಂಚಿಕೊಂಡಿದ್ದಾರೆ..