ಧಾರವಾಡ : ಹಲವಾರು ಕಾರಣಗಳಿಂದಾಗಿ ಬೆಣ್ಣೆ ಹಳ್ಳ ಮತ್ತು ತುಪರಿ ಹಳ್ಳ ಕಾಮಗಾರಿ ಸದ್ಯಕ್ಕೆ ಆರಂಭವಾಗುತ್ತಿಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ನವಲಗುಂದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಸಾರಿ ಮಳೆ ಬಂದಾಗ ಬೆಣ್ಣೆ ಹಳ್ಳ ಮತ್ತು ತುಪ್ಪರಿ ಹಳ್ಳ ತುಂಬಿ ಪ್ರವಾಹವನ್ನು ಸೃಷ್ಟಿ ಮಾಡುತ್ತವೆ. ಕಿತ್ತೂರು, ಬೆಳಗಾವಿ, ಹಾವೇರಿ, ಶಿಗ್ಗಾವಿ ಕ್ಷೇತ್ರದ ಎಲ್ಲಾ ನೀರು ಕೂಡ ಇಲ್ಲಿಗೆ ಬರುತ್ತದೆ. 56ಕ್ಕೂ ಹೆಚ್ಚು ಹಳ್ಳಿಗಳಿಗೆ ದೊಡ್ಡ ಪ್ರಮಾಣದಲ್ಲಿ ನೀರು ಬರುತ್ತದೆ. ಅದ್ದರಿಂದ ಜನರಿಗೆ ತೊಂದರೆಯಾಗುತ್ತದೆ. 200 ಕೋಟಿ ರೂ. ವೆಚ್ಚದಲ್ಲಿ 140 ಕಿಮೀ ನಷ್ಟು ಹಳ್ಳದ ಕಾಮಗಾರಿಯ ಟೆಂಡರ್ ಕರೆಯಲಾಗಿದೆ. ಕಾರಣಾಂತರದಿಂದ ಕಾಮಗಾರಿ ಸದ್ಯಕ್ಕೆ ಆರಂಭ ಆಗಲ್ಲ ಮುಂದಿನ ವರ್ಷ ಕಾಮಗಾರಿ ಆರಂಭ ಮಾಡುತ್ತೇವೆ. ಹಳ್ಳದ ಪಕ್ಕದ ಗ್ರಾಮಗಳ ಜನರಿಗೆ ಜಾಗೃತಿ ಮೂಡಿಸಲು ಮಾಕ್ ಡ್ರಿಲ್ ಮಾಡಲಾಗಿದೆ ಎಂದಿದ್ದಾರೆ.
ಇದೆ ರೀತಿಯ 5 ಬ್ಯಾಚ್ ಗಳನ್ನು ನಿರ್ಮಿಸಲು ಸೂಚಿಸಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಅವುಗಳನ್ನು ಬಳಸಿಕೊಳ್ಳಬೇಕು. ಯಾವುದೇ ಪ್ರಾಣಹಾನಿ ಆಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸದ್ಯಕ್ಕೆ ನಮ್ಮಲ್ಲಿ ಮಳೆ ಕಡಿಮೆಯಾಗಿದೆ. ಮೂರು ತಿಂಗಳಲ್ಲಿ ಬೇರೆ ಕಡೆ ಮಳೆಯಾದರೂ ಸಹ ನಮಲ್ಲಿ ಪ್ರವಾಹ ಭೀತಿ ಇದೆ. ಹೀಗಾಗಿ ಜನರ ಅನುಕೂಲಕ್ಕೆ ಈ ಮಾಕ್ ಡ್ರಿಲ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.