ಕೊಪ್ಪಳ: ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗಿದೆ ಎಂಬ ವದಂತಿ ಹರಡಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿಂದು ಜನರು ಪೆಟ್ರೋಲ್ ಬಂಕ್ಗಳತ್ತ ಮುಗಿಬಿದ್ದ ಘಟನೆ ವರದಿಯಾಗಿದೆ.
ಜಿಲ್ಲೆಯ ಗಂಗಾವತಿ ಭಾಗದ ಪೆಟ್ರೋಲ್ ಬಂಕ್ಗಳಲ್ಲಿ ಈ ಗದ್ದಲ ಕಂಡುಬಂದಿದ್ದು, ಪೆಟ್ರೋಲ್, ಡೀಸೆಲ್ ಸಿಗುವುದಿಲ್ಲ ಎಂಬ ಭಯದಿಂದ ಜನರು ಕ್ಯಾನ್ ಮತ್ತು ಡ್ರಮ್ಗಳನ್ನು ತೆಗೆದುಕೊಂಡು ಬಂದು ಇಂಧನ ಸಂಗ್ರಹಿಸಲು ಮುಂದಾಗಿದ್ದಾರೆ.
ಬಂಕ್ ಸಿಬ್ಬಂದಿಗಳು ಯಾವುದೇ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರೂ, ಜನರು ಆತಂಕದಿಂದ ಡ್ರಮ್ ಹಾಗೂ ಕ್ಯಾನ್ಗಳಲ್ಲಿ ಡೀಸೆಲ್ ತುಂಬಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದವು. ಕೆಲವರು ಟ್ರಾಕ್ಟರ್ಗಳಲ್ಲಿ ಡ್ರಮ್ಗಳನ್ನು ತರಿಸಿ ಇಂಧನ ತುಂಬಿಸಿಕೊಂಡಿರುವುದು ಗಮನಸೆಳೆದಿದೆ.
ವದಂತಿಗಳ ಪರಿಣಾಮ ಅನಗತ್ಯ ಗೊಂದಲ ಉಂಟಾಗಿದ್ದು, ಅಧಿಕಾರಿಗಳು ಸಾರ್ವಜನಿಕರು ಆತಂಕಪಡದೇ, ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿ ಉರಿದ ಫರ್ನಿಚರ್ ಶಾಪ್


















