ಬೆಂಗಳೂರು: ರಾಜ್ಯದ ಹಲವೆಡೆ ಮುಂಗಾರು ಮಳೆ ವ್ಯಾಪಕವಾಗಿ ಸುರಿಯುತ್ತಿದ್ದು, ಹಲವೆಡೆ ಮುಂಗಾರು ಪೂರ್ವ ಮಳೆಯೇ ಜನರನ್ನು ಬೆಚ್ಚಿ ಬೀಳಿಸಿತ್ತು. ಇದರಿಂದಾಗಿ ಹಲವೆಡೆ ಜನ-ಜೀವನ ಅಸ್ತವ್ಯಸ್ಥವಾಗಿದ್ದು, ಜನರ ಬದುಕು ಮೂರಾಬಟ್ಟೆಯಾಗಿದೆ. ಸಾಕಷ್ಟು ಅವಂತಾರಗಳು ನಡೆದಿದ್ದು, ಹಲವರು ಸೂರು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಸರ್ಕಾರ ಸಹಾಯ ಮಾಡಲು ಮುಂದಾಗಿದೆ.
ಅತಿವೃಷ್ಠಿ ಅಥವಾ ಪ್ರವಾಹದಿಂದ ಹಾನಿಯಾದ ಮನೆಗಳಿಗೆ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರವು ಪರಿಹಾರ ಬಿಡುಗಡೆ ಮಾಡಿದೆ. 1-4-2025ರಿಂದ 31-5-2025ರ ಅವಧಿಯಲ್ಲಿ ಹಾನಿಯಾದ ಮನೆಗಳಿಗೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿ ಆದೇಶಿಸಲಾಗಿದ್ದು, ಪೂರ್ಣ ಪ್ರಮಾಣ ಮನೆ ಕಳೆದುಕೊಂಡವರಿಗೆ 1.20 ಲಕ್ಷ ರೂ ಹಾಗೂ ದೇವರಾಜ್ ಅರಸು ವಸತಿ ಯೋಜನೆಯಡಿ ಮನೆ ಮಂಜೂರು ಮಾಡುವಂತೆ ಸೂಚಿಸಲಾಗಿದೆ.
ಪೂರ್ಣ ಹಾನಿಯಾದ ಮನೆಗೆ ರೂ.1.20 ಲಕ್ಷ ರೂ. ಪರಿಹಾರ. ಜೊತೆಗೆ ದೇವರಾಜ್ ಅರಸು ವಸತಿ ಯೋಜನೆಯಡಿ ಮನೆ ನಿರ್ಮಿಸಿ ಕೊಡುವುದು. ಶೇ 50 ಕ್ಕಿಂತ ಮೇಲ್ಪಟ್ಟು ಹಾಗೂ ಶೇ 75 ಕ್ಕಿಂತ ಕಡಿಮೆ, ಮನೆಯ ಗೋಡೆಗಳ ಕುಸಿತ ಹಾಗೂ ಮೇಲ್ಛಾವಣಿ ಹಾನಿಗೆ 50 ಸಾವಿರ ರೂ. ಅತೀ ಸಣ್ಣ ಪ್ರಮಾಣದ ಹಾನಿ ಶೇ.15ಕ್ಕಿಂತ ಮೇಲ್ಪಟ್ಟು ಹಾಗೂ ಶೇ. 20ಕ್ಕಿಂತ ಕಡಿಮೆ ಮನೆಯ ಮೇಲ್ಛಾವಣಿಯ ಹಂಚು, ಶೀಟುಗಳ, ಬಾಗಿಲು ಮತ್ತು ಕಿಟಕಿಗಳ ಹಾನಿ, ಇನ್ನಿತರ ಸಣ್ಣ ಪುಟ್ಟ ಹಾನಿಗೆ 6,500 ರೂ. ಪರಿಹಾರ. ಮಧ್ಯಮ ಪ್ರಮಾಣ ಮನೆ ಹಾನಿ ಅಂದರೆ ಶೇ. 20ಕ್ಕಿಂತ ಮೇಲ್ಪಟ್ಟು ಹಾಗೂ ಶೇ.50ಕ್ಕಿಂತ ಕಡಿಮೆ ಮನೆಯ ಗೋಡೆಗಳಲ್ಲಿ ಬಿರುಕು, ಸಣ್ಣ ಪ್ರಮಾಣದ ಕುಸಿತಕ್ಕೆ 50 ಸಾವಿರ ರೂ. ಪರಿಹಾರ ನೀಡಲು ಸೂಚಿಸಲಾಗಿದೆ.