ಆರ್ಸಿಬಿ ಟೀಂ ಕಪ್ ಗೆಲ್ಲಲಿ ಅಂತಾ ಮಲೆ ಮಹದೇಶ್ವರ ಸ್ವಾಮಿಗೆ ಅಭಿಮಾನಿಯೊಬ್ಬ ಮುಡಿ ಅರ್ಪಿಸಿದ್ದಾನೆ. ಮೈಸೂರಿನ ಶಶಿಕುಮಾರ್ ಮುಡಿ ಕೊಟ್ಟು, ಮಲೆ ಮಹದೇಶ್ವರನಿಗೆ ಈಡುಗಾಯಿ ಒಡೆದು ಪೂಜೆ ಸಲ್ಲಿಸಿದ್ದಾನೆ. ಅಲ್ಲದೆ, ಮಲೆ ಮಹದೇಶ್ವರ ಬೆಟ್ಟದಲ್ಲಿ ಆರ್ಸಿಬಿ ಜೆರ್ಸಿಗೂ ಪೂಜೆ ಸಲ್ಲಿಸಿ ಅಭಿಮಾನ ಮೆರೆದಿದ್ದಾನೆ.

ಈ ಸಲ ಕಪ್ ನಮ್ದೆ ಅಂತಾ ಶಶಿಕುಮಾರ್ ಅಭಿಮಾನ ವ್ಯಕ್ತಪಡಿಸಿದ್ದು, ಅಯ್ಯಪ್ಪನ ದೇಗುಲಕ್ಕೆ 18 ಮೆಟ್ಟಿಲು.. ಈ ಬಾರಿ ಸೀಸನ್ 18, ವಿರಾಟ್ ಕೊಹ್ಲಿ ಜೆರ್ಸಿ ನಂಬರ್ ಕೂಡ 18.. ಹಾಗಾಗಿ ಈ ಸಲ ಕಪ್ ನಮ್ದೆ ಅಂತಾ ಉದ್ಘರಿಸಿದ್ದಾನೆ. ನಾನು ಮುಡಿ ಅರ್ಪಿಸಿರೋದು ಬರೀ ಟ್ರೈಲರ್.. ಕಪ್ ಗೆದ್ರೆ ಅದ್ಧೂರಿ ಪೂಜೆ-ಹೋಮ ಮಾಡಿಸ್ತೇನೆ ಅಂತಾ ಆರ್ಸಿಬಿ ಬಿಗ್ ಫ್ಯಾನ್ ಶಶಿಕುಮಾರ್ ಹೇಳಿದ್ದಾನೆ.