ತುಮಕೂರು : ಕುಣಿಗಲ್ನಲ್ಲಿ ಪುಡಿರೌಡಿಗಳ ಹಾವಳಿ ಹೆಚ್ಚಾಗಿದೆ. ಬಿಯರ್ ಹಣ ಕೇಳಿದ್ದಕ್ಕೆ ಲಾಂಗ್ ಬೀಸಿ ಬೆದರಿಕೆ ಹಾಕಿರುವ ಘಟನೆ ಕುಣಿಗಲ್ ತಾಲ್ಲೂಕಿನ ಸಂತೆಪೇಟೆಯ ಜೆಕೆ ಬಾರ್ನಲ್ಲಿ ನಡೆದಿದೆ.
ಕೆಂಪನಹಳ್ಳಿಯ ಮಂಜುನಾಥ್(28), ನಿಟ್ಟೂರು ಮನೋಜ್@ಸಣ್ಣ(24) ಆರೋಪಿಗಳಾಗಿದ್ದಾರೆ. ಬಿಯರ್ ಖರೀದಿಸಿದ ಕುಡುಕ ಹಣ ಕೇಳಿದ್ದಕ್ಕೆ ಬಾರ್ ಕ್ಯಾಷಿಯರ್ ಗುರುಮೂರ್ತಿಗೆ ಬೆದರಿಕೆ ಹಾಕಿದ್ದಾರೆ. ತಮ್ಮ ಇಟಿಯೋಸ್ ಕಾರ್ನಲ್ಲಿ ತಂದಿದ್ದ ಲಾಂಗ್ ತಂದು ಕ್ಯಾಶ್ ಕೌಂಟರ್ ಮೇಲೆ ಬೀಸಿದ್ದಾನೆ.
ಪುಡಿರೌಡಿಗಳ ಅಟ್ಟಹಾಸ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪುಡಿರೌಡಿಗಳ ಹೆಡೆಮುರಿಕಟ್ಟಿ ಪೋಲಿಸರು ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ : ಹೊಂಡಾ ಸಿಬಿ750 ಹಾರ್ನೆಟ್ 2026 | ಇ-ಕ್ಲಚ್ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆ ; ಭಾರತಕ್ಕೆ ಯಾವಾಗ?



















