ಬೆಂಗಳೂರು; ದುಬಾರಿ ದುನಿಯಾದಲ್ಲಿ ಬೆಂಗಳೂರು ಮಂದಿಗೆ ಮತ್ತೊಂದು ಬರೆ ಬಿದ್ದಿದೆ. ನಗರದ ಮಾರುಕಟ್ಟೆಗಳಲ್ಲಿ ದಿನ ಬಳಕೆಯ ದಿನಸಿ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಅಕ್ಕಿ, ಮೆಣಸು, ಬೇಳೆ ದರ ದಿಢೀರ್ ಏರಿಕೆ ಆಗಿದ್ದು ಜನರ ಜೇಬಿಗೆ ಕತ್ತರಿ ಬಿದ್ದಿದೆ. ದುಬಾರಿ ದುನಿಯಾ ಒಂದಿಲ್ಲೊಂದು ಬೆಲೆ ಏರಿಕೆ ಸಾಮಾನ್ಯ .ಇದೀಗ ದಿನ ಬಳಕೆಯ ದಿನಸಿ ಪದಾರ್ಥಗಳ ಬೆಲೆ ದಿನದಿಂದ ದಿನಕ್ಕೆ ಜಿಗಿತ ಕಾಣಲು ಶುರುವಾಗಿದೆ. ಅಕ್ಕಿ, ಬೇಳೆ, ಮೆಣಸಿನ ಬೆಲೆ ದಿಢೀರ್ ಏರಿಕೆ ಆಗೋಕೆ ಶುರುವಾಗಿದೆ. ನಗರದ ಅತಿ ದೊಡ್ಡ ದಿನಸಿ ಪದಾರ್ಥಗಳ ಮಾರುಕಟ್ಟೆಯಾದ ಅಕ್ಕಿಪೇಟೆಯಲ್ಲೇ ಸಗಟು ವ್ಯಾಪಾರದ ಬೆಲೇಯೇ ಭಾರೀ ಏರಿಕೆ ಕಂಡಿದೆ. ಪರಿಣಾಮ ನಗರದ ಚಿಲ್ಲರೆ ವ್ಯಾಪರದಲ್ಲೂ ದರ ಏರಿಕೆ ಆಗಿದ್ದು, ಅಹಾರ ಪದಾರ್ಥಗಳಿಂದ ಜನರ ಕೈ ಸುಡುವಂತಾಗಿದೆ.
ಯಾವ ಯಾವ ದಿನಸಿ ಪದಾರ್ಥಗಳ ಬೆಲೆ ಏರಿಕೆ
(ಪದಾರ್ಥಗಳು : ಹಳೆ ದರ : ಹೊಸ ದರ – ಕೆಜಿಗೆ)
ಜೀರಾ ಸಾಂಬ ಅಕ್ಕಿ – ₹140 : ₹200
ಸೋನಾ ಮಸೂರಿ ಅಕ್ಕಿ : ₹70 : ₹77
ಬಾಸುಮತಿ : ₹90 – ₹130 : ₹110 – ₹160
ಒಣಮೆಣಸು : ₹200 : ₹500
ತೊಗರಿ ಬೇಳೆ : ₹95 : ₹130
ಕಡಲೆಬೀಜ : ₹140 : ₹200
ಕೊತ್ತಂಬರಿ ಕಾಳು : ₹160 : ₹220
ಹೀಗೆ ಸಗಟು ವ್ಯಾಪಾರದ ಬೆಲೆಗಿಂತ ಚಿಲ್ಲರೆ ವ್ಯಾಪಾರದಲ್ಲಿ ಮತ್ತೆ 10 ರಿಂದ 25% ನಷ್ಟು ಹೆಚ್ಚಳ ಆಗಿದೆ. ಈ ಬಾರಿ ಸೀಮಿತ ಪದಾರ್ಥಗಳ ಇಳುವರಿ ಕಡಿಮೆ ಹಾಗೂ ಆಹಾರ ಪದಾರ್ಥಗಳ ರಫ್ತು ಹೆಚ್ಚಾದ ಹಿನ್ನೆಲೆ ದರ ಏರಿಕೆ ಅಂತಿದ್ದಾರೆ ವರ್ತಕರು. ಹೀಗಾಗಿ ಪ್ರತಿ ಕೆಜಿ ಮೇಲೆ ಬಹಳ ದೊಡ್ಡ ಪ್ರಮಾಣದಲ್ಲಿ ಬೆಲೆ ಏರಿಕೆ ಆಗಿದೆ. ಇನ್ನೂ ಕೆಲವು ದಿನಗಳ ಇದೇ ರೀತಿ ದರ ಏರಿಕೆ ಆಗುವ ಸಾಧ್ಯತೆಯನ್ನು ವರ್ತರಕು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಬೈಂದೂರು | ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ವಿವಿಧ ಕಂಪನಿಗಳ CSR ನಿಧಿಗಳಿಂದ ಸುಮಾರು 20ಕೋಟಿ ರೂ. ವಿನಿಯೋಗ ; B.S ಸುರೇಶ್ ಶೆಟ್ಟಿ



















