ಮಂಗಳೂರು : ಬಂಟ್ವಾಳ ತಾಲ್ಲೂಕಿನ ವೀರಕಂಬ ಗ್ರಾಮದ ರಾಜೇಶ್ವರಿ ಅವರ ಮನೆ ಶಾಟ್ ಸರ್ಕ್ಯೂಟ್ ಕಾರಣಕ್ಕೆ ಬೆಂಕಿಗೆ ಒಳಗಾಗಿದೆ. ಮನೆಯಲ್ಲಿರದ ಸಮಯದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಟಿವಿ, ಫ್ರಿಡ್ಜ್ ಸೇರಿದಂತೆ ಹಲವಾರು ಬೆಲೆಬಾಳುವ ವಸ್ತುಗಳು ನಾಶವಾಗಿವೆ.
ಮನೆಗೆ ಬಾಗಿಲು ಹಾಕಿ ಕೆಲಸಕ್ಕೆ ಹೋಗಿದ್ದ ರಾಜೇಶ್ವರಿ, ಮನೆ ಮಾಡಿನಿಂದ ಹೊಗೆಯಾಡುತ್ತಿರುವುದನ್ನು ಗಮನಿಸಿ ಬಾಗಿಲು ಮುರಿದು ನೋಡಿದಾಗ ಬೆಂಕಿ ಹತ್ತಿರುವುದು ಬೆಳಕಿಗೆ ಬಂದಿದೆ. ಮಕ್ಕಳ ಶಾಲೆ ಪುಸ್ತಕಗಳು, ಬಟ್ಟೆಬರೆ, ಮನೆ ಕಾಗದಪತ್ರಗಳು ಸಹ ಬೆಂಕಿಗೆ ಬಾಧೆ ಆಗಿದ್ದು, ಬಡ ಕುಟುಂಬದ ಪರಿಸ್ಥಿತಿ ತೀವ್ರ ದುಃಖಕರವಾಗಿದೆ.
ದಕ್ಷಿಣಕನ್ನಡ ಪೊಲೀಸ್ ಮತ್ತು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಂಕಿ ಹತ್ತಿದ ಕಾರಣ ಶಾಟ್ ಸರ್ಕ್ಯೂಟ್ ಎಂದು ಪ್ರಾಥಮಿಕ ವರದಿ ನೀಡಿದ್ದಾರೆ.
ಇದನ್ನೂ ಓದಿ : ಉಡುಪಿ | ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ.. ಪ್ರಯಾಣಿಕರು ಅಪಾಯದಿಂದ ಪಾರು!



















