ಐಪಿಎಲ್ 2025ರಲ್ಲಿ ಪಂಜಾಬ್ ಕಿಂಗ್ಸ್ (PBKS) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪಂದ್ಯದಲ್ಲಿ ಯುವ ಆಟಗಾರ ಪ್ರಿಯಾಂಶ್ ಆರ್ಯ ಅವರು ಒಂದು ಐತಿಹಾಸಿಕ ಶತಕ ಸಿಡಿಸಿದ್ದಾರೆ. ಇದು ಎಲ್ಲರ ಗಮನ ಸೆಳೆದಿದೆ. ಈ 24 ವರ್ಷದ ದೆಹಲಿ ಆಟಗಾರನ ಈ ಅದ್ಭುತ ಪ್ರದರ್ಶನದ ಹಿಂದೆ ಕಾಡಿನಲ್ಲಿ ನಡೆದ ಗುರುಕುಲದಂತಹ ತರಬೇತಿ ನೀಡಲಾಗಿದೆ ಎಂದು ಅವರ ಕೋಚ್ ಸಂಜಯ್ ಭಾರದ್ವಾಜ್ ಅವರು ಇಂಡಿಯಾ ಟುಡೆಗೆ ನೀಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ.
ಪ್ರಿಯಾಂಶ್ ಆರ್ಯ ಅವರು ಮಂಗಳವಾರ, ಏಪ್ರಿಲ್ 8ರಂದು ನಡೆದ ಪಂದ್ಯದಲ್ಲಿ ಕೇವಲ 39 ಚೆಂಡುಗಳಲ್ಲಿ ಶತಕ ಸಿಡಿಸಿದರು. ಇದು ಐಪಿಎಲ್ನಲ್ಲಿ ಒಂದು ಗಮನಾರ್ಹ ಸಾಧನೆಯಾಗಿದೆ. ಈ ಶತಕ ಐಪಿಎಲ್ ಇತಿಹಾಸದಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡದ ಆಟಗಾರ ಸಿಡಿಸಿದ ಅತ್ಯಂತ ವೇಗದ ಶತಕಗಳಲ್ಲಿ ಒಂದಾಗಿದೆ. ಪ್ರಿಯಾಂಶ್ ತಮ್ಮ ತಂಡವನ್ನು 219 ರನ್ಗಳ ಉತ್ತಮ ಮೊತ್ತದತ್ತ ಕೊಂಡೊಯ್ದರು. ಇದರಿಂದ ಪಂಜಾಬ್ ಕಿಂಗ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 18 ರನ್ಗಳಿಂದ ಜಯ ಗಳಿಸಿತು. ಈ ಪಂದ್ಯದಲ್ಲಿ ಚೆನ್ನೈ ತಂಡ 201ರನ್ಗೆ ಸೀಮಿತಗೊಂಡಿತು. ಪ್ರಿಯಾಂಶ್ನ ಆಕ್ರಮಣಕಾರಿ ಆಟವು ಗೆಲುವಿನಲ್ಲಿ ನಿರ್ಣಾಯಕವಾಯಿತು.
ಕಾಡಿನಲ್ಲಿ
ಪ್ರಿಯಾಂಶ್ನ ತರಬೇತಿಯ ಹಿಂದಿನ ರಹಸ್ಯವನ್ನು ಭಾರದ್ವಾಜ್ ಅವರು ಬಹಿರಂಗಪಡಿಸಿದ್ದಾರೆ. “ನಾನು ಭೋಪಾಲ್ನಲ್ಲಿ ಒಂದು ರೆಸಿಡೆನ್ಷಿಯಲ್ ಅಕಾಡೆಮಿ ನಡೆಸುತ್ತೇನೆ. ಇದು ರತಾಪಾನಿ ಕಾಡಿನೊಳಗೆ ಇದ್ದು, ನಗರದಿಂದ 20 ಕಿಲೋಮೀಟರ್ ದೂರದಲ್ಲಿದೆ. ಇದನ್ನು ಗುರುಕುಲದಂತೆ ಇದೆ ,” ಎಂದು ಅವರು ಹೇಳಿದರು. ಈ ತರಬೇತಿ ಕೇಂದ್ರವನ್ನು ಸುಲಭವಾಗಿ ಕಂಡುಹಿಡಿಯುವುದು ಕಷ್ಟ, ಏಕೆಂದರೆ ಇದಕ್ಕೆ ಯಾವುದೇ ಸೂಚನಾ ಫಲಕವಿಲ್ಲ. “ನಾವು ಯಾವುದೇ ಸೂಚನಾ ಫಲಕವನ್ನು ಇಡುವುದಿಲ್ಲ. ಇದು ದೆಹಲಿಯ ಮಾಲಿನ್ಯ ಮತ್ತು ಉಷ್ಣಾಂಶದಿಂದ ದೂರವಾಗಿ ತರಬೇತಿ ನೀಡುತ್ತದೆ,” ಎಂದು ಅವರು ಹೇಳಿದರು.
ಪ್ರಿಯಾಂಶ್ನ ದಿನದ ತರಬೇತಿ 12 ಗಂಟೆಗಳವರೆಗೆ ಚಾಲ್ತಿಯಲ್ಲಿರುತ್ತವೆ/ ದಿನದಲ್ಲಿ ಕೇವಲ ಒಂದು ಗಂಟೆಯಷ್ಟೇ ಫೋನ್ ಬಳಕೆಯ ಅವಕಾಶವಿದೆ. ತರಬೇತಿ ದಿನವು ಬೆಳಿಗ್ಗೆ 6:30ರಿಂದ ಸಂಜೆ 6:00ರವರೆಗೆ ನಡೆಯುತ್ತದೆ, ಮತ್ತು ಆಹಾರವು ಸಾಂಪ್ರದಾಯಿಕ ಕಟ್ಟಿಗೆ ಒಲೆಯಲ್ಲಿ ಸಿದ್ಧಗೊಳ್ಳುತ್ತದೆ.
ಪ್ರದರ್ಶನದ ವಿವರ
ಪ್ರಿಯಾಂಶ್ ತಮ್ಮ ಶತಕದ ದಿನದ ಮರುದಿನ ಬೆಳಿಗ್ಗೆ ತಮ್ಮ ಕೋಚ್ ಭಾರದ್ವಾಜ್ ಫೋನ್ ಮಾಡಿ , “ನಾನು ಚೆನ್ನಾಗಿ ಆಡಿದೆಯೇ?” ಎಂದು ಕೇಳಿದರು. ಈಗಾಗಲೇ ತಮ್ಮ ಪ್ರದರ್ಶನಕ್ಕೆ ಗಮನ ಸೆಳೆದಿದ್ದ ಪ್ರಿಯಾಂಶ್ಗೆ ಭಾರದ್ವಾಜ್ ಅವರು, “ಎಲ್ಲವನ್ನೂ ದೇವರಿಗೆ ಬಿಟ್ಟುಬಿಡಿ. ದೇವರ ಕೃಪೆಯಿದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು,” ಎಂದು ಉತ್ತರಿಸಿದರು.
ಈ ಶತಕದಲ್ಲಿ ಪ್ರಿಯಾಂಶ್ 42 ಚೆಂಡುಗಳಲ್ಲಿ 103 ರನ್ ಗಳಿಸಿದ್ದು, ಇದರಲ್ಲಿ ಒಂಬತ್ತು ಸಿಕ್ಸರ್ಗಳು ಮತ್ತು ಏಳು ಬೌಂಡರಿಗಳು ಸೇರಿವೆ.
ಮುಂದಿನ ಸವಾಲು
ಪ್ರಿಯಾಂಶ್ನ ಈ ಪ್ರದರ್ಶನಕ್ಕಾಗಿ ಅವರಿಗೆ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಲಭಿಸಿತು. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ 2025ರಲ್ಲಿ ಮೂರನೇ ಗೆಲುವು ಸಾಧಿಸಿದೆ. ಇದೀಗ ತಂಡ ಮತ್ತು ಪ್ರಿಯಾಂಶ್ನ ಮೇಲೆ ಎಲ್ಲರ ಕಣ್ಣುಗಳು, ಏಕೆಂದರೆ ಅವರು ಶನಿವಾರ, ಏಪ್ರಿಲ್ 12ರಂದು ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಆಡಲಿದ್ದಾರೆ. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದ ಬ್ಯಾಟರ್ಗೆ ಅನುಕೂಲವಾಗುವ ಪಿಚ್ನಲ್ಲಿ ಈ ಪಂದ್ಯ ನಡೆಯಲಿದ್ದು, ಪ್ರಿಯಾಂಶ್ನ ಮುಂದಿನ ಪ್ರದರ್ಶನವನ್ನು ಕಾದು ನೋಡಬೇಕಿದೆ.



















