ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿದಲ್ಲಿ 11 ಮಂದಿ ಬಲಿಯಾದ ಪ್ರಕರಣದಲ್ಲೀಗ ಆರ್ ಸಿಬಿ ವಿರುದ್ಧವೇ ಜನಾಕ್ರೋಶ ವ್ಯಕ್ತವಾಗುತ್ತಿದೆ.
ತಮ್ಮ ನೆಚ್ಚಿನ ಆಟಗಾರನ ನೋಡಲು ಬಂದು ಪ್ರಾಣತೆತ್ತವರ ಪರ ಕೇವಲ ಸಂತಾಪ ಸೂಚಿಸಿದರೆ ಸಾಲದು ಅನ್ನೋ ಕಿಚ್ಚು ಹೊತ್ತುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಪ್ರಾಣತೆತ್ತ 11 ಮಂದಿ ಕುಟುಂಬಗಳಿಗೆ ಆರ್ ಸಿಬಿ ಆರ್ಥಿಕ ನೆರವು ನೀಡಬೇಕು ಅನ್ನೋ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ತಾರಕಕ್ಕೇರುತ್ತಿದೆ. ಐಪಿಎಲ್ ವಿಜೇತ ತಂಡಕ್ಕೆ ಬಿಸಿಸಿಐ ನೀಡಲಿರುವ 20 ಕೋಟಿಯನ್ನ ಮೃತರ ಕುಟುಂಬಗಳಿಗೆ ಹಂಚಲಿ ಅನ್ನೋ ಅಭಿಯಾನ ಆರಂಭವಾಗಿದೆ.
ಈ ದುರಂತಕ್ಕೆ ಆರ್ ಸಿಬಿಯೇ ನೇರ ಹೊಣೆ ಅನ್ನೋ ಆರೋಪ ವ್ಯಕ್ತವಾಗ್ತಿದ್ದು, ಬಹುಮಾನ ಮೊತ್ತವನ್ನು ಮೃತರ ಕುಟುಂಬಗಳಿಗೆ ನೀಡಿ ಆರ್ ಸಿಬಿ ಉದಾರ ಮನಸ್ಸು ಪ್ರದರ್ಶಿಸಬೇಕು ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.