ಬೆಂಗಳೂರು ಗ್ರಾಮಾಂತರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಪುರಸಭೆ ಎದುರು ಪೌರ ಕಾರ್ಮಿಕರು ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಿದ್ದಾರೆ.
ಪುರಸಭೆಯ ಪೌರ ನೌಕರರು ತಮ್ಮ ಕೆಲಸ ಬಿಟ್ಟು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ವಿಜಯಪುರ ಪಟ್ಟಣದಲ್ಲಿ ಯಾವುದೇ ಸ್ವಚ್ಛತಾ ಕಾರ್ಯ ಮಾಡದೆ ಪಟ್ಟು ಹಿಡಿದು ನೌಕರರ ಮುಷ್ಕರ ಮಾಡಿದ್ದಾರೆ. ಕಚೇರಿ ಕೆಲಸ ನಿರ್ವಹಿಸದೆ ಮುಷ್ಕರದಲ್ಲಿ ನೌಕರರು ಭಾಗಿಯಾಗಿರುವುದರಿಂದ ಕಚೇರಿ ಕೆಲಸಕ್ಕೆ ಬಂದಿದ್ದ ನಾಗರಿಕರಿಗೆ ಪರದಾಡುವ ಪರಿಸ್ಥಿತಿ ಎದುರಾಗುತ್ತಿದೆ.
ಪಿಂಚಣಿ, ಆರೋಗ್ಯ ವಿಮೆ ಸೇರಿದಂತೆ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತತಾಯಿಸಿ ಕಾರ್ಮಿಕರು ಧರಣಿ ನಡೆಸುತ್ತಿದ್ದಾರೆ. ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪ್ರತಿಭಟಿಸಿದ್ದಾರೆ.