ನಟಿ ತಮನ್ನಾ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದ್ದಕ್ಕೆ KSDL ವಿರುದ್ಧ ಕನ್ನಡಪರ ಸಂಘಟನೆ ಯುವ ಕರ್ನಾಟಕ ವೇದಿಕೆಯಿಂದ ಪ್ರತಿಭಟನೆ ನಡೆಸಲಾಗಿದೆ.
ಪರಭಾಷೆಯ ನಟಿಗೆ ರಾಯಭಾರಿ ಪಟ್ಟ ಕಟ್ಟಿ ಕೋಟಿ ಕೋಟಿ ಸಂಭಾವನೆ ನೀಡಿ ಪರಭಾಷೆ ನಟಿಗೆ ರೆಡ್ ಕಾರ್ಪೆಟ್ ಹಾಸಲಾಗಿದೆ. ಅವರಿಗೆ 6.2 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ಕನ್ನಡಪರ ಸಂಘಟನೆಗಳು ಗರಂ ಆಗಿವೆ. ಇದನ್ನು ಖಂಡಿಸಿ KSDL ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.