ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತದ ಸಾಲಿಗೆ ಬರುವ ಪ್ರವಾಸಿಗರ ಜೀವದ ಜೊತೆಗೆ ಖಾಸಗಿ ಬಸ್ ಮಾಲೀಕರು ಚೆಲ್ಲಾಟವಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತದಲ್ಲಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ನೋಡಲು ಬಂದ ಪ್ರವಾಸಿಗರಿಗೆ ಖಾಸಗಿ ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಬಸ್ ಟಾಪ್ ಮೇಲೆ ಕೂರಲು ಅವಕಾಶಕೊಟ್ಟು ಪ್ರಯಾಣಿಕರ ಜೀವದ ಜೊತೆ ಜೆಲ್ಲಾಟವಾಡಿರುವ ದೃಶ್ಯ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ರಸ್ತೆಯ ಬಸ್ನಲ್ಲಿ ಕಂಡು ಬಂದಿದೆ.
ತಿರುವು, ನೂರಾರು ಅಡಿಗಳ ಪ್ರಪಾತದಿಂದ ಕೂಡಿರುವ ರಸ್ತೆಯಲ್ಲಿ 20 ಕ್ಕೂ ಅಧಿಕ ಪ್ರವಾಸಿಗರನ್ನ ಟಾಪ್ ಮೇಲೆ ಬಸ್ ಸಿಬ್ಬಂದಿಗಳು ಕೂರಿಸಿದ್ದಾರೆ. ಈ ಹಿನ್ನೆಲೆ ಚಿಕ್ಕಮಗಳೂರು RTO ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳ ವಿರುದ್ಧ ಸಾರ್ವಜಿನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಂಜಾನ್ ಮುಗಿದ ಹಿನ್ನೆಲೆ ಸಾವಿರಾರು ಸಂಖ್ಯೆಯಲ್ಲಿ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ಹೊರ ರಾಜ್ಯ, ಜಿಲ್ಲೆಗಳಿಂದ ಬಂದ ಸಾವಿರಾರು ಪ್ರವಾಸಿಗರ ಜೀವದ ಜೊತೆಗೆ ಖಾಸಗಿ ಬಸ್ ಸಿಬ್ಬಂದಿಗಳು ಚೆಲ್ಲಾಟವಾಡಿದ್ದಾರೆ.
ಈ ಹಿಂದೆಯೂ ಬಸ್ಗಳು ತಿರುವುಗಳಲ್ಲಿ ಪ್ರಪಾತಕ್ಕೆ ಉರುಳಿರುವ ಉದಾಹರಣೆ ಇರುವುದರಿಂದ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ವದಂತಿಗೆ ಬೆಚ್ಚಿದ ವಾಹನ ಸವಾರರು : ಪೆಟ್ರೋಲ್ ಬಂಕ್ಗೆ ಮುಗಿಬಿದ್ದ ಬೆಳಗಾವಿ ಮಂದಿ


















