ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ಜೈಲು ಹಕ್ಕಿ ಆಗಿದ್ದಾರೆ. ಈಗ ವಕೀಲರನ್ನು ನೇಮಿಸಿಕೊಳ್ಳಲು ಕೂಡ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ಟ್ರಯಲ್ (Trial Court) ಪ್ರಾರಂಭ ಮಾಡಲು ನನ್ನ ಬಳಿ ವಕೀಲರು ಇಲ್ಲ ಎಂದು ಪ್ರಜ್ವಲ್ ರೇವಣ್ಣ (Prajwal Revanna) ಹೇಳಿದ್ದಾರೆ ಎನ್ನಲಾಗಿದೆ. ಹೀಗಿಗ ಕೋರ್ಟ್ ಉಚಿತ ಕಾನೂನು ಸೇವೆ ಒದಗಿಸಿದೆ.
ಉಚಿತ ಕಾನೂನು ನೆರವಿನ ಅಡಿ ವಕೀಲರನ್ನು ಕೋರ್ಟ್ ನೇಮಕ ಮಾಡಿದೆ. ತಮ್ಮ ಪರ ವಾದ ಮಂಡಿಸಲು ವಕೀಲರನ್ನು (Advocate) ನೇಮಿಸಿಕೊಳ್ಳದ ಪ್ರಜ್ವಲ್ಗೆ ಸಾಕಷ್ಟು ಸಮಯ ನೀಡಿದರೂ ವಕೀಲ ನಿಯೋಜಿಸಿಕೊಳ್ಳಲಿಲ್ಲ. ಹೀಗಾಗಿ ಈ ನಿರ್ಧಾರ ಕೈಗೊಂಡಿದೆ. ವಕೀಲರ ನೇಮಕಕ್ಕೆ ಸಮಯ ನೀಡುವಂತೆ ಪ್ರಜ್ವಲ್ ಮನವಿ ಮಾಡಿದ್ರು. ಆದ್ರೆ ಪ್ರಜ್ವಲ್ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.