ದಾವಣಗೆರೆ : ಪ್ರದೀಪ್ ಈಶ್ವರ್ಗೆ ತಲೆ ಇಲ್ಲ. ಅಬ್ದುಲ್ ಕಲಾಂ ನ ರಾಷ್ಟ್ರ ಪತಿ ಮಾಡಿದ್ದು ಯಾರು ಅಂಥ ಮೊದಲು ತಿಳ್ಕೊ.ನಿನ್ನ ಕ್ಷೇತ್ರದಲ್ಲಿ ಓಳ್ಳೆ ಕೆಲಸ ಮಾಡೋದು ಕಲಿ ಮೊದಲು ಎಂದು ದಾವಣಗೆರೆ 2023ರ ವಿಧಾನ ಸಭಾ ದಕ್ಷಿಣ ಕ್ಷೇತ್ರದ ಪರಜಿತಾ ಅಭ್ಯರ್ಥಿ ಅಜಯ್ ಕುಮಾರ್ ಕಿಡಿಕಾರಿದ್ದಾರೆ.
ಮರದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೇಸ್ ಮುಂದಿನ ಬಾರಿ ಟಿಕೆಟ್ ಕೊಡಬೇಕು, ದೊಡ್ಡ ಹುದ್ದೆ ಕೊಡಬೇಕು ಅಂತ ಬಾಯಿಗೆ ಬಂದ ಹಾಗೆ ಮಾತಾಡಬೇಡ. 24 ಜನ ಅಲ್ಪ ಸಂಖ್ಯಾತರು ನಾಮ ಪತ್ರ ಸಲ್ಲಿಸಿದ್ದಾರೆ. ಇತಿಹಾಸದಲ್ಲೇ ಇಷ್ಟೊಂದು ಜನ ಅಲ್ಪ ಸಂಖ್ಯಾತರು ನಾಮ ಪತ್ರ ಸಲ್ಲಿಸಿಲ್ಲ. ಅಷ್ಟು ಜನ ಅಲ್ಪ ಸಂಖ್ಯಾತರಿಗೆ ನೀವು ಮೋಸ ಮಾಡ್ತಾ ಇದ್ದೀರಾ. ಇದನ್ನ ತಲೆಲಿ ಇಡ್ಕೊಂಡು ಮಾತಾಡು. ನೀನು ದಾವಣಗೆರೆ ಗೆ ಬಂದ್ರೆ ಅಲ್ಪ ಸಂಖ್ಯಾತರೆ ಹೊಡೆಯುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಲ್ಪ ಸಂಖ್ಯಾತ ಜನರು ನೀವು ಕಾಂಗ್ರೆಸ್ಗೆ ಉತ್ತರ ಕೊಡಬೇಕು. ಅಲ್ಪ ಸಂಖ್ಯಾತರು 500 ಬಿರಿಯಾನಿಗೆ ಸೀಮಿತನ ಈ ಬೈ ಎಲೆಕ್ಷನ್ ಲಿ ನೀವೇ ಉತ್ತರ ಕೊಡಬೇಕು. ಸಂವಿಧಾನ ಕೊಟ್ಟಿರುವ ಮತ ದಾನದ ಹಕ್ಕನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಕೇಂದ್ರದಲ್ಲಿ ಇರುವ ಬಿಜೆಪಿ ರಾಜ್ಯದಲ್ಲಿ ಆಡಳಿತದಲ್ಲಿ ಇದ್ದಂತ ಬಿಜೆಪಿ ಯಾವ ಅಲ್ಪ ಸಂಖ್ಯಾತರಿಗೆ ತೊಂದ್ರೆ ಕೊಟ್ಟಿದ್ದಾರೆ ಹೇಳಿ. ಬಿಜೆಪಿ ಒಬ್ಬ ಅಹಿಂದ ವ್ಯಕ್ತಿಗೆ ಟಿಕೆಟ್ ಕೊಟ್ಟಿದೆ. ನಾವೆಲ್ಲ ಸಹೋದರರೇ ಶ್ರಿನಿವಾಸ್ ದಾಸ್ ಕರಿಯಪ್ಪಗೆ ಓಟ್ ಹಾಕಿ ಗೆಲ್ಲಿಸಿ ಎಂದು ಹೇಳಿದ್ದಾರೆ.
ಇದನ್ನ ಓದಿ : ‘ಕೈ’ ಮುಖಂಡನ ಕೊಲೆಗೆ ಯತ್ನ.. ಚಾಕು ಇರಿದು ದುಷ್ಕರ್ಮಿಗಳು ಜೂಟ್



















