ಪ್ರಧಾನಿ ನರೇಂದ್ರ ಮೋದಿ ಪಾಡ್ಕಾಸ್ಟ್ಗೆ ಪದಾರ್ಪಣೆ ಮಾಡಿದ್ದಾರೆ. ಸ್ಟಾಕ್ ಮಾರ್ಕೆಂಟಿಂಗ್ (Stock Marketing) ಬ್ರೋಕಿಂಗ್ ಸಂಸ್ಥೆ ‘ಝೆರೋದಾ’ (zerodha) ಸಹ ಸಂಸ್ಥಾಪಕ ನಿಖಿಲ್ ಕಾಮತ್(Nikhil Kamat) ನಡೆಸಿಕೊಟ್ಟಿರುವ ಪಾಡ್ಕಾಸ್ಟ್ನಲ್ಲಿ ಪ್ರಧಾನಿ ಮೋದಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ ಕೆಲವೊಂದು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಸಂಭಾಷಣೆಯ ವೇಳೆಯಲ್ಲಿ ಗುಜರಾತ್(Gujarat) ಮುಖ್ಯಮಂತ್ರಿಯಾಗಿದ್ದ ಸಂದರ್ಭದ ಕುರಿತು ಪ್ರಧಾನಿ ಮೋದಿ ಮೆಲುಕು ಹಾಕಿದ್ದಾರೆ.
ಪಾಡ್ಕಾಸ್ಟ್ನಲ್ಲಿ ಅವರು ತಾವು ದೇವರಲ್ಲ, ಮಾನವ ಎಂದು ಹೇಳಿಕೊಂಡಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಮೋದಿ ಅವರು ʼʼತಾವು ದೇವರು ಕಳುಹಿಸಿದ ವ್ಯಕ್ತಿ, ಜೈವಿಕ ಮಾನವ ಅಲ್ಲ,ʼʼ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ನಿಖಿಲ್ ಕಾಮತ್ ಅವರು ಬಿಡುಗಡೆ ಮಾಡಿರುವ ಟ್ರೈಲರ್(Trailer) ನಲ್ಲಿ ಕೆಲವೊಂದು ಅಂಶಗಳನ್ನು ಬಹಿರಂಗಗೊಂಡಿದೆ. ತಾವು ಗುಜರಾತ್ ಮುಖ್ಯಮಂತ್ರಿಯಾಗಿ ಮಾಡಿದ ಭಾಷಣದಲ್ಲಿ ಕೆಲವೊಂದು ತಪ್ಪುಗಳು ಆಗಿವೆ. ನಾನು ಕೂಡ ಕೆಲವು ತಪ್ಪುಗಳನ್ನು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
“ನಾನು ಕೂಡ ಮನುಷ್ಯ, ದೇವರಲ್ಲ” ಎಂದು ಪ್ರಧಾನಿ ಟ್ರೈಲರ್ನಲ್ಲಿ ಹೇಳಿರುವುದು ಹೆಚ್ಚು ಗಮನ ಸೆಳೆದಿದೆ.
ಉತ್ತಮ ವ್ಯಕ್ತಿತ್ವ ಹೊಂದಿರುವ ಜನರು ರಾಜಕೀಯಕ್ಕೆ ಪ್ರವೇಶಿಸಬೇಕೆಂದು ಪ್ರಧಾನಿ ಅಲ್ಲಿ ಪ್ರತಿಪಾದಿಸಿದ್ದಾರೆ. ಎಲ್ಲರೂ ಮಹತ್ವಾಕಾಂಕ್ಷೆಯೊಂದಿಗೆ ಅಲ್ಲ, ಧ್ಯೇಯದೊಂದಿಗೆ ಬರಬೇಕು ಎಂದು ಒತ್ತಿ ಹೇಳಿದ್ದಾರೆ.
ಎಕ್ಸ್ ನಲ್ಲಿ ಟ್ರೈಲರ್ ಅನ್ನು ಹಂಚಿಕೊಂಡ ಮೋದಿ, “ನಿಮಗಾಗಿ ಇದನ್ನು ನಿರ್ಮಿಸಿದ್ದು ನಾವು ಆನಂದಿಸಿದಷ್ಟೇ ನೀವೆಲ್ಲರೂ ಖುಷಿ ಪಡುತ್ತೀರಿ ಎಂದು ನಾನು ಭಾವಿಸುತ್ತೇನೆ!” ಎಂದು ಹೇಳಿದ್ದಾರೆ.