ಅದೊಂದು, ಅದೊಂದು ಮಾತು ನಿಜಕ್ಕೂ ನೂರಾರು ಕುಟುಂಬಗಳ ಆಕ್ರಂದನವನ್ನ ಮುಗಿಲು ಮುಟ್ಟುವಂತೆ ಮಾಡ್ತಿದೆ. ಅಹಮದಾಬಾದ್ ವಿಮಾನ ದುರಂತ ಪ್ರಕರಣದಲ್ಲಿ ಈವರೆಗೂ 84 ಮೃತದೇಹಗಳ ಡಿಎನ್ಎ ಪರೀಕ್ಷೆ ಅಂತ್ಯವಾಗಿದ್ದು, 55 ಹೆಚ್ಚು ಕುಟುಂಬಗಳಿಗೆ ಹಸ್ತಾಂತರ ಮಾಡಲಾಗಿದೆ.
ಆದ್ರೆ, ನಿಜಕ್ಕೂ ನಗರದ ಸಿವಿಲ್ ಆಸ್ಪತ್ರೆ ಮುಂದಿನ ದೃಶ್ಯಗಳು ಎಂಥವರ ಕಣ್ಣಲ್ಲೂ ನೀರು ತರುಸುವಂತಿದೆ. ಹೌದು, ಮೃತದೇಹಗಳನ್ನು ಕಟ್ಟಿಗೆಯ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಕುಟುಂಬಸ್ತರಿಗೆ ಹಸ್ತಾಂತರ ಮಾಡಲಾಗ್ತಿದೆ. ಹೀಗೆ ಹಸ್ತಾಂತರದ ಬಳಿಕ ವೈದ್ಯರು, ಯಾವುದೇ ಕಾರಣಕ್ಕೂ ದಯವಿಟ್ಟು ಪೆಟ್ಟಿಗೆಯನ್ನು ಓಪನ್ ಮಾಡುವ ಕೆಲಸ ಮಾಡಬೇಡಿ ಅಂತಿದ್ದಾರೆ.
ಹೌದು, ವಿಮಾನದ ಪತನದ ನಂತ್ರ ಸ್ಫೋಟಿಸಿದ ಪೆಟ್ರೋಲ್ ಟ್ಯಾಂಕ್ ಸೃಷ್ಟಿಸಿದ ಜ್ವಾಲಾಮುಖಿಯಲ್ಲಿ ಬೆಂದಿರೋ ದೇಹಗಳು ನಿಜಕ್ಕೂ ರಣಘೋರ ಪರಿಸ್ಥಿತಿಯಲ್ಲಿವೆ. ನಿಮ್ಮವರ ನೆನಪು ನಿಮಗೆ ಈ ಹಿಂದಿನಂತೆಯೇ ನಿಮ್ಮ ಮನಗಳಲ್ಲಿರಲಿ, ಹಾಗಂತಾ ಅವರ ಅಂತಿಮ ದರ್ಶನ ಮಾಡೋ ದುಸ್ಸಾಹಸ ಬೇಡ. ಯಾರೊಬ್ಬರಿಗೂ ಈ ಬೆಂದು ಹೋದ ದೇಹಗಳನ್ನು ನೋಡುವ ಸಂದರ್ಭ ಬರೋದು ಬೇಡ ಅಂತಿದ್ದಾರೆ.