ಗಾಂಧೀನಗರ: ಗುಜರಾತ್ ನ (Gujarat) ಅಹಮದಾಬಾದ್ (Ahmedabad) ನಲ್ಲಿ ನಡೆದ ವಿಮಾನ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 265ಕ್ಕೆ ಏರಿಕೆ ಕಂಡಿದೆ.
ನಿನ್ನೆ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ವಿಮಾನ ನಿಲ್ದಾಣ ಹತ್ತಿರದ ಮೇಘನಿ ನಗರದ ಬಿಜೆ ಎಂಬಿಬಿಎಸ್ ಕಾಲೇಜಿನ ಹಾಸ್ಟೆಲ್ ಮೇಲೆ ವಿಮಾನ ಬಿದ್ದ ಪರಿಣಾಮ ಹಾಸ್ಟೆಲ್ ನಲ್ಲಿ ಊಟ ಮಾಡುತ್ತಿದ್ದ ಹಲವು ವಿದ್ಯಾರ್ಥಿಗಳು ಕೂಡ ಸಾವನ್ನಪ್ಪಿದ್ದರು. ಸುತ್ತಮುತ್ತಲಿನ ಜನರು ಕೂಡ ಸಾವನ್ನಪ್ದಿದ್ದರು.
ವಿಮಾನದಲ್ಲಿದ್ದ 242 ಜನರ ಪೈಕಿ ಓರ್ವ ವ್ಯಕ್ತಿ ಮಾತ್ರ ಜೀವಂತ ಉಳಿದು, ಇನ್ನುಳಿದ 241 ಜನರು ಸಾವನ್ನಪ್ಪಿದ್ದರು. ಈಗ ಅಂಕಿ-ಅಂಶಗಳ ಪ್ರಕಾರ, ವಿಮಾನದಲ್ಲಿದ್ದ 1688 ಭಾರತೀಯರು, 53 ಬ್ರಿಟಿಷ್, ಓರ್ವ ಕೆನಡಾ ಮತ್ತು ಏಳು ಪೋರ್ಚುಗೀಸ್ ಪ್ರಜೆಗಳು ಸೇರಿದಂತೆ 12 ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಬಿಜೆ ಮೆಡಿಕಲ್ ಕಾಲೇಜಿನ 5 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಭಾರೀ ಬೆಂಕಿ ಹೊತ್ತಿಕೊಂಡ ಪರಿಣಾಮ ಅಲ್ಲಿದ್ದ 19 ಸ್ಥಳೀಯರು ಸಾವನ್ನಪ್ಪಿದ್ದಾರೆ. ಗಾಯಾಳುಗಳಿಗೆ ರಕ್ತ ಬೇಕಾಗಿದ್ದು, ಸೈನಿಕರು ರಕ್ತದಾನ ಮಾಡುತ್ತಿದ್ದಾರೆ. ಗಾಯಾಳುಗಳಿಗೆ ಓ ನೆಗೆಟಿವ್ ರಕ್ತ ಬೇಕಾಗಿದ್ದು, ಹೆಮ್ಮೆಯ ಸೈನಿಕರು ಆ ಕೊರತೆ ನೀಗಿಸುತ್ತಿದ್ದಾರೆ.