ಕಾಸು ಕೊಟ್ಟು ಹೊಡೆಸಿಕೊಳ್ಳುವುದು ಅಂದ್ರೆ ಇದೆ ನೋಡಿ…ಜನರು ಕಾಸು ಕೊಟ್ಟು ಹಳೆ ಪೊರ ಮೊರದಲ್ಲಿ ಹೊಡೆಸಿಕೊಂಡಿದ್ದಾರೆ.
ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ಧರ್ಮರಾಯಸ್ವಾಮಿ ದ್ರೌಪದಿ ಕರಗದ ಅಂಗವಾಗಿ ಕೋಟೆ ಜಗಳ ಎಂಬ ವಿಶಿಷ್ಟ ಧಾರ್ಮಿಕ ಆಚರಣೆ ನಡೆಯುತ್ತಿದೆ. ಕಾಳಿ ವೇಷಧಾರಿ ಮೇಕೆ ಶ್ವಾಸಕೋಶವನ್ನು ಬಾಯಿಯಲ್ಲಿ ಹಾಕಿಕೊಳ್ಳುತ್ತಾರೆ. ಈ ವೇಳೆ ಕಾಳಿದೇವಿ ವೇಷಧಾರಿ ಸಿಕ್ಕ ಸಿಕ್ಕವರಿಗೆ ಪೊರಕೆ, ಮೊರದಲ್ಲಿ ಹೊಡೆಯುತ್ತಾರೆ.
ಇದನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುತ್ತಾರೆ. ಕೋಟೆ ಜಗಳದಲ್ಲಿ ಕಾಳಿ ದೇವಿಯ ಆವಾಹನೆಗೊಳಗಾದ ವ್ಯಕ್ತಿಯಿಂದ ಕರಗದ ಗುಡಿಯಲ್ಲಿ ಗುಡಿಸಿದ ಪೊರಕೆ, ಮೊರದಲ್ಲಿ ಹೊಡೆಸಿಕೊಂಡರೇ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಜನರಿಗೆ ಇರುವುದರಿಂದ ಜನರು ದುಡ್ಡು ಕೊಡ್ಡು ಹೊಡೆಸಿಕೊಳ್ಳುತ್ತಾರೆ.