ಮೊಬೈಲ್ ಗೀಳು ಮತ್ತು ಸೋಶಿಯಲ್ ಮೀಡಿಯಾ ಹುಚ್ಚಿನ ಕಾರಣ ಜನರು ಥಿಯೇಟರ್ ಕಡೆಗೆ ಬರ್ತಿಲ್ಲ ಎಂದು ಹಾಸ್ಯ ನಟ ಹಾಗೂ ನಿರ್ದೇಶಕ ಸಾಧು ಕೋಕಿಲ ಹೇಳಿದ್ದಾರೆ.
ಸೂಪರ್ ಹಿಟ್ ಚಿತ್ರದ ವೇದಿಕೆಯಲ್ಲಿ ಮಾತನಾಡಿದ ಸಾಧು ಕೋಕಿಲ, ಸಿನಿಮಾ ಗೆಲ್ಲಬೇಕಾದರೆ ಕೇವಲ ಸಿನಿಮಾ ಚೆನ್ನಾಗಿದೆ ಎಂದು ನಿಂತು ಹೇಳುವುದರಿಂದ ಪ್ರಯೋಜನವಿಲ್ಲ, ಒಳ್ಳೆ ಪ್ರಚಾರ ಅತ್ಯಗತ್ಯ. ನೀವು ಯಾವ ರೀತಿಯಲ್ಲಿ ಪ್ರಚಾರ ಮಾಡ್ತೀರೋ ಅದ್ರ ಮೇಲೆ ಸಿನಿಮಾ ಓಡುತ್ತೆ. ಜನರನ್ನು ಥಿಯೇಟರ್ಗೆ ಕರೆಸೋಕೆ ನೀವು ಎಲ್ಲರೂ ಶ್ರಮಿಸಲೇಬೇಕು ಎಂದಿದ್ದಾರೆ.
ಗಿಲ್ಲಿ ಕುರಿತು ಬುದ್ದಿಮಾತು ಹೇಳಿದ ಅವರು ಈ ಸಿನಿಮಾಗೆ ಗಿಲ್ಲಿ ಅನ್ನೋ ಅಸ್ತ್ರ ಸಿಕ್ಕಿದೆ. ಗಿಲ್ಲಿ ನಾಲ್ಕು ತಿಂಗಳು ಬಿಗ್ ಬಾಸ್ ಮನೆಯಲ್ಲಿ ಇದ್ದು ಬಂದಿದ್ದಾನೆ. ಬಿಗ್ ಬಾಸ್ನಿಂದ ಹೊರಬಂದ ಮೇಲೆ ಹೊರಗಿನ ಪ್ರಪಂಚಕ್ಕೆ ಅಡ್ಜೆಸ್ಟ್ ಆಗಬೇಕಾಗುತ್ತದೆ. ಗಿಲ್ಲಿ ಯಾಕೋ ಸೈಲೆಂಟ್ ಆಗಿದ್ದಾನೆ ಅಂತ ಅನಿಸಬಹುದು, ಆದರೆ ಅವನ ಮನಸ್ಥಿತಿ ಆ ರೀತಿ ಇದೆ ಎಂದು ಹೇಳಿದ್ದಾರೆ.
ಗಿಲ್ಲಿ ಬಿಗ್ ಬಾಸ್ನಲ್ಲಿ ಸಾಧನೆ ಮಾಡಿದ್ದಾನೆ ಅಂತ ನಾನು ಹೇಳಲ್ಲ. ಆದರೆ ಜನರ ಮುಂದೆ ಯಾರು ಮಾಡದ ಸಾಧನೆ ಮಾಡಿದ್ದಾನೆ. ಬಿಗ್ ಬಾಸ್ನಲ್ಲಿ ಗಿಲ್ಲಿ ತರ ಜನರಿಗೆ ಕ್ಲೋಸ್ ಆದವರು ಯಾರೂ ಇಲ್ಲ. ಇಡೀ ಕರ್ನಾಟಕದ ಜನ ನಿಮಗೆ ಫ್ಯಾನ್ಸ್ ಆಗಿದ್ದಾರೆ, ಅದನ್ನು ಉಳಿಸಿಕೊಳ್ಳಿ ಎಂದು ಹೇಳಿದ್ದಾರೆ.
ಅಂತೆಯೇ ಗಿಲ್ಲಿಗೆ ಸಲಹೆ ನೀಡಿದ ಸಾಧು ಕೋಕಿಲ, ಜೋರಾಗಿ ಫ್ಯಾನ್ ಹಾಕಿ ನಿಮ್ಮನ್ನ ಸುತ್ತಿಸಿ ಬಿಡ್ತಾರೆ. ಕೆಳಗಡೆ ಗಮ್ ಹಾಕಿಕೊಂಡು ಅಂಟಿಸಿಕೊಂಡು ಯಾವ ಗಾಳಿಗೂ ಹೋಗಬೇಡಿ. ಸಕ್ಸೆಸ್ಗೆ ಮೈ ಮರೆಯಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ : ಸಿದ್ದರಾಮಯ್ಯ ಕರ್ನಾಟಕ ಕಂಡ ಅತ್ಯಂತ ಪುಕ್ಕಲ, ಹೇಡಿ ಮುಖ್ಯಮಂತ್ರಿ | ಪ್ರತಾಪ್ ಸಿಂಹ ವಾಗ್ದಾಳಿ



















