ದಾವಣಗೆರೆ: ಪಹಲ್ಗಾಮ್ ದಾಳಿ ವಿಜಯೋತ್ಸವದ ಹಿನ್ನೆಲೆಯಲ್ಲಿ ಹಿನ್ನೆಲೆ, ದಾವಣಗೆರೆಯಲ್ಲಿ ಬಿಜೆಪಿಯಿಂದ ತಿರಂಗಾ ಯಾತ್ರೆ ಆಯೋಜನೆ ಮಾಡಲಾಗಿತ್ತು. ಬೀರಲಿಂಗೇಶ್ವರ ದೇವಾಲಯದಿಂದ, ಎವಿಕೆ ರಸ್ತೆ ಮಾರ್ಗವಾಗಿ ಅಮರ್ ಜವಾನ್ ವೃತ್ತದವರೆಗೆ ಮಳೆಯನ್ನು ಲೆಕ್ಕಿಸದೆ ಮಾಜಿ ಸೈನಿಕರು, ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಹೆಜ್ಜೆ ಹಾಕಿದರು.
ಬೀರಲಿಂಗೇಶ್ವರ ದೇವಾಲಯದಿಂದ, ಎವಿಕೆ ರಸ್ತೆ ಮಾರ್ಗವಾಗಿ ಅಮರ್ ಜವಾನ್ ವೃತ್ತದವರೆಗೆ ಮಳೆಯನ್ನು ಲೆಕ್ಕಿಸದೆ ತಿರಂಗಾ ಯಾತ್ರೆ ಮೂಲಕ ವಿಜಯೋತ್ಸವವನ್ನು ನಡೆಸಲಾಯಿತು. ನಗರದಾದ್ಯಂತ ಸುಮಾರು ನಾಲ್ಕು ಕಿ.ಮೀ ಅಧಿಕ ದೂರ ಸಂಚರಿಸಿಲಾಯಿತು. ಕೈನಲ್ಲಿ 100 ಮೀಟರ್ ಉದ್ದದ ತ್ರಿವರ್ಣ ಧ್ವಜ ಹಿಡಿದು ರಸ್ತೆಯುದ್ದಕ್ಕೂ ಜೈಕಾರ ಹಾಕಿ ಹೆಜ್ಜೆ ಹಾಕಲಾಯಿತು.
ಭಾರತ ಮಾತೆಯ ಪರ ಘೋಷಣೆ ದಾರಿಯುದ್ದಕ್ಕೂ ಮಾರ್ದನಿಸಿದವು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ನಟಿ ಮತ್ತು ಬಿಜೆಪಿ ವಕ್ತಾರೆ ಮಾಳ್ವಿಕಾ ಅವಿನಾಶ್ ಸೇರಿದಂತೆ ಜಿಲ್ಲಾ ಬಿಜೆಪಿ ನಾಯಕರು ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿ ಸಾವಿರಾರು ದೇಶಭಕ್ತರು ಭಾಗಿಯಾಗಿದ್ದರು.