ಪೊಲೀಸ್ ಕಮಿಷನರ್ ಬಿ.ದಯಾನಂದ್ ಅಮಾನತು ವಿಚಾರವಾಗಿ ಮೊಳಕಾಲ್ಮೂರು ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ. 11 ಜನರನ್ನ ಬಲಿ ಪಡೆದು ನೀನು ಪೊಲೀಸ್ ಕಮಿಷನರ್ ಸಸ್ಪೆಂಡ್ ಮಾಡಿದ್ದೀಯಾ? ನಿನಗೆ ನಾಚಿಕೆ ಆಗ್ಬೇಕಲ್ವಾ? ನಾಯಕ ಸಮುದಾಯದ ಪ್ರಾಮಾಣಿಕ ಅಧಿಕಾರಿಯನ್ನು ಅಮಾನತು ಮಾಡಿದ್ದೀಯಾ.
ನಾಯಕ ಸಮುದಾಯದ ಬಗ್ಗೆ ನಿನಗೆ ಅಭಿಮಾನ ಇಲ್ಲ.ನಾಯಕ ಜನಾಂಗದ ಮತ ಪಡೆದು 187 ಕೋಟಿ ನಾಗೇಂದ್ರ ಅವರಿಂದ ಹೊಡೆಸಿ, ಜೈಲಿಗೆ ಕಳಿಸಿದೆ. ನನಗೂ ಟಿಕೆಟ್ ಕೊಡಿಸ್ತೇನೆ ಎಂದು ಮೋಸ ಮಾಡಿದ್ದು ನೀನೆ. ಮುಡಾ ಹಗರಣ, ಅರ್ಕಾವತಿ ಹಗರಣದಲ್ಲಿ ಸಿಲುಕಿದ್ದಿಯಾ. ಕೂಡಲೇ ಕಮಿಷನರ್ ಅವರ ಅಮಾನತು ಆದೇಶ ಹಿಂಪಡೆಯಬೇಕು. ಇಲ್ಲವಾದರೆ ನಾಯಕ ಸಮಾಜದಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.