ಬೆಂಗಳೂರು: ನಿನ್ನೆ ಎತ್ತಿನಹೊಳೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಮಗ್ರವಾಗಿ ಎಲ್ಲರನ್ನೂ ಕರೆದು ಚರ್ಚೆ ಮಾಡಿದ್ದಾರೆ. ಎತ್ತಿನಹೊಳೆ ನೀರನ್ನು 2027ರ ಒಳಗೆ ಕೊಡಬೇಕು ಅಂತ ತೀರ್ಮಾನ ಮಾಡಿದ್ದೇವೆ. ಯೋಜನೆ ಜಾರಿಗೆ ತರುವುದಕ್ಕಾಗಿ ಅರಣ್ಯ ಇಲಾಖೆಯಿಂದ ಯಾವೆಲ್ಲ ತೊಂದರೆ ಇವೆಯೋ ಆ ಕುರಿತು ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಅಕ್ವಿಜೀಷನ್ ಸಮಸ್ಯೆ ಕೂಡ ಪರಿಹರಿಸಲು ನಿರ್ಧಾರವಾಗಿದೆ. ಆರ್ಥಿಕ ಸಮಸ್ಯೆ ಇದೆ. ತುಮಕೂರಿಗೆ ಹೋಗಿ ಕೆಲ ಕಾಲ ಅಲ್ಲಿ ಸಭೆ ಮಾಡುತ್ತೇನೆ. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳುತ್ತೇವೆ. ನಾನು ಖುದ್ದಾಗಿ ಗಮನಿಸಿ ಮುಂದಿನ ಕ್ಯಾಬಿನೆಟ್ ಗೆ ಮಾಹಿತಿ ನೀಡುತ್ತೇನೆ. ಸಿಎಂ ನನಗೆ ಈ ಬಗ್ಗೆ ನಿರ್ದೇಶನ ನೀಡಿದ್ದಾರೆ. ಬೇರೆಲ್ಲಾ ಪ್ರಾಜೆಕ್ಟ್ ತಡವಾದರೂ ಪರವಾಗಿಲ್ಲ. ಇದು ಮುಗಿಯಬೇಕು ಅಂತಾ ಸೂಚಿಸಿದ್ದಾರೆ. ಹೀಗಾಗಿ ಎತ್ತಿನಹೊಳೆ ಯೋಜನೆಗೆ ನಮ್ಮ ಸರ್ಕಾರದ ಮೊದಲ ಆದ್ಯತೆ ಇದೆ ಎಂದಿದ್ದಾರೆ.
ಬಿ.ಆರ್ ಪಾಟೀಲ್ ಆಡಿಯೋ ವಿಚಾರವಾಗಿ ಮಾತನಾಡಿದ ಅವರು, ಪಾಟೀಲ್ ಏನು ಮಾತನಾಡಿದ್ದಾರೆ ಎಂಬುವುದು ನನಗೆ ಅರ್ಥ ಆಗಿಲ್ಲ. ಸಿಎಂ ಅದರ ಬಗ್ಗೆ ಗಮನ ಹರಿಸುತ್ತಾರೆ. ಪ್ರತಿಯೊಂದು ಅನುದಾನ ಟ್ರಾನ್ಸ್ಪರೆಂಟ್ ಆಗಿ ಫಲಾನುಭವಿಗಳಿಗೆ ಹೋಗಲಿದೆ. ಯಾವ ಸರ್ಕಾರದಲ್ಲಿ ಒಂದುವರೆ ಲಕ್ಷ ರೂ. ಕೊಟ್ಟು ಪಡೆಯಲಾಗಿದೆ. ಯಾವ ಉದ್ದೇಶದಿಂದ ಅವರು ಮಾತನಾಡಿದ್ದಾರೆ ಎಂಬುವುದು ಗೊತ್ತಿಲ್ಲ ಎಂದಿದ್ದಾರೆ.
ಇದು ಸರಿಯಲ್ಲ. ನಾನು ಖಂಡಿಸುತ್ತೇನೆ. ಈ ಕುರಿತು ಸಿಎಂ ಜೊತೆ ಚರ್ಚಿಸುತ್ತೇನೆ. ಯಾವ ಅರ್ಥದಲ್ಲಿ ಹೇಳಿದ್ದೀರಿ ಗೊತ್ತಿಲ್ಲ, ಇದು ಸರಿಯಲ್ಲ ಎಂದಿದ್ದಾರೆ.
ಡಿಸಿಎಂ ಡಿಕೆಶಿ ನಟ್ಟು, ಬೋಲ್ಟ್ ಹೇಳಿಕೆಗೆ ನಟ ಸುದೀಪ್ ಬೇಸರ ವ್ಯಕ್ತಪಡಿಸಿರುವ ವಿಚಾರವಾಗಿ ಮಾತನಾಡಿದ ಅವರು, ನಾನು ಯಾವಗಲೂ ಉತ್ತರ ಕೊಡಲು ಬಯಸುವುದಿಲ್ಲ. ಎಲ್ಲವನ್ನೂ ಬಿಚ್ಚಿಡುವುದು ಬೇಡ. ನಾನು ಈಗ ಆ ವಿಷಯವಾಗಿ ಮಾತನಾಡುವುದಿಲ್ಲ. ಫಿಲಂ ಚೇಂಬರ್ ಗೆ ಹೋಗಿ ಹಿಸ್ಟರಿ ತೆಗೆದು ನೋಡಿ. ನಾನು ಫಿಲ್ಮ್ ಚೇಂಬರ್ ಗಾಗಿ ಏನು ಮಾಡಿದ್ದೇನೆ ಎಂಬುವುದು ಗೊತ್ತಾಗುತ್ತದೆ. ಎಲ್ಲರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ ಎಂದು ಸುದೀಪ್ ಗೆ ಟಾಂಗ್ ಕೊಟ್ಟಿದ್ದಾರೆ.