ಬೆಂಗಳೂರು: ಆರ್ಸಿಬಿ ಅಂದ್ರೆ Real Culprits of Bangalore ಎಂದು ಹೇಳುವ ಮೂಲಕ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ (R Ashok) ಲೇವಡಿ ಮಾಡಿದ್ದಾರೆ.
ಸಿಎಂ, ಡಿಸಿಎಂ ವಿಸ್ಕಿ ಬಾಟಲಿಗಾಗಿ ಆರ್ ಸಿಬಿ ಪ್ರಮೋಷನ್ ಗೆ ವಿಧಾನಸೌಧ ಕಾರ್ಯಕ್ರಮ ಮಾಡಿದ್ದಾರೆ. ಆರ್ಸಿಬಿ ಅಂದ್ರೆ Real Culprits of Bangalore ಅಂತ ಲೇವಡಿ ಮಾಡಿದ್ದಾರೆ. ಇಂದು ನಾವು ಸುಮಾರು ಬೆರಳೆಣಿಕೆಯಷ್ಟು ಅಂದರೆ 40ರ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ, 150 ಜನರು ಬಂದಿದ್ದಾರೆ. ನಮ್ಮ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಮುಂದಾಗಿದೆ. ನಮ್ಮನ್ನೂ ಬಂಧಿಸಬಹುದು.
ಪೊಲೀಸರ ಪರ ನಮ್ಮ ಹೋರಾಟ, ದುರಂತದಲ್ಲಿ ಪೊಲೀಸರ ಪಾತ್ರ ಇಲ್ಲ. ವಿಧಾನಸೌಧ ಡಿಸಿಪಿ ಕ್ಲೀನಾಗಿ ಪತ್ರದಲ್ಲಿ ಬರೆದಿದ್ದಾರೆ. ಆದರೂ ಪೊಲೀಸರ ಮಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕಾರ್ಯಕ್ರಮ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.