ದಾವಣಗೆರೆ : ದಾವಣಗೆರೆಯಲ್ಲಿ ಒಂದು ಮದುವೆ ಎರಡು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಸ್ವತಿ ಪ್ರಿಯಕರನನ್ನು ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಕುಮಾರ್ ಅಲಿಯಾಸ್ ಕುಮಾರ್ ಬಂಧಿತ ಆರೋಪಿ. ನಿನ್ನೆ ರಾತ್ರಿ ಮೃತ ಹರೀಶ್ ಪತ್ನಿ ಸರಸ್ವತಿ ಪೊಲೀಸರು ಬಂಧಿಸಿದ್ದರು. ಸರಸ್ವತಿ ತನ್ನ ಪ್ರಿಯಕರ ಕುಮಾರ್ ಜೊತೆ ಓಡಿಹೋಗಿದ್ದ ಆರೋಪ ಕೇಳಿಬಂದಿದ್ದು, ಜ.26ರಂದು ಡೆತ್ನೋಟ್ ಬರೆದಿಟ್ಟು ಹರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಎರಡೂವರೆ ತಿಂಗಳ ಹಿಂದೆ ಗುಮ್ಮನೂರಿನ ಹರೀಶ್ ಜೊತೆ ಸರಸ್ವತಿ ವಿವಾಹವಾಗಿತ್ತು. ಜ.23ರಂದು ಗುಮ್ಮನೂರಿನ ಗಂಡನ ಮನೆಯಿಂದ ಸರಸ್ವತಿ ನಾಪತ್ತೆಯಾಗಿದ್ದಳು. ಸರಸ್ವತಿ ಕಾರಿನಲ್ಲಿ ತೆರಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಘಟನೆಯ ಬಳಿಕ ಹರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದು, ನಂತರ ಸುದ್ದಿ ತಿಳಿದು ಸರಸ್ವತಿ ಸೋದರಮಾವ ರುದ್ರೇಶ್ ಸಹ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿತ್ತು. ಇದೀಗ ಪ್ರಿಯಕರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ಚಿಕ್ಕಮಗಳೂರಲ್ಲಿ ಭೀಕರ ಅಪಘಾತ | ನಿಂತಿದ್ದ ಬೋರ್ವೆಲ್ ಲಾರಿಗೆ ಬೊಲೆರೋ ಡಿಕ್ಕಿ.. ಓರ್ವ ಸಾವು, 6 ಮಂದಿಗೆ ಗಂಭೀರ ಗಾಯ!



















