ʻ
ಮಧುಗಿರಿಯಲ್ಲಿ ಸಚಿವ ರಾಜಣ್ಣ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸಚಿವ ರಾಜಣ್ಣ ಅವರೇ ನಿಮ್ಮ ಹಿರಿತನಕ್ಕೆ ಗೌರವವಿದೆ ಬೆಲೆ ಕೊಡುತ್ತೇವೆ. ಆದರೆ, ಕ್ಷೇತ್ರದಲ್ಲಿ ಹಿಟ್ಲರ್ ರಾಜಕಾರಣ ಮಾಡಬೇಡಿ. ನಿಮ್ಮ ದರ್ಪಕ್ಕೆ, ಧಮ್ಕಿಗೆ, ಅಹಂಕಾರಕ್ಕೆ ಯಾರೂ ಹೆದರುವುದಿಲ್ಲ. ಮಧುಗಿರಿಯಲ್ಲಿ ನಿಮ್ಮ ಟಾರ್ಗೆಟ್ ರಾಜಕಾರಣ ನಡೆಯಲ್ಲ. ಕಾರ್ಯಕರ್ತರ ಜತೆ ನಾವಿದ್ದೇವೆ.
ಮಧುಗಿರಿ ಕ್ಷೇತ್ರ ನಮಗೆ ಮಾತೃ ಕ್ಷೇತ್ರ. ಯಾರು ಎದೆಗುಂದಬೇಡಿ ಎಂದು ನಿಖಿಲ್ ಹೇಳಿದ್ದಾರೆ. ಕೃಷಿ ಇಲಾಖೆಯಲ್ಲಿ ನರಸಿಂಹಮೂರ್ತಿ ಎಂಬ ಡಿ ಗ್ರೂಪ್ ನೌಕರ ಜೆಡಿಎಸ್ ಅಭಿಮಾನಿ ಆಗಿದ್ದೆ ತಪ್ಪ ಎಂದು ಪ್ರಶ್ನಿಸಿದ ಅವರು ಅಮಾಯಕರನ್ನು ಟಾರ್ಗೆಟ್ ಮಾಡಿ ಬಲಿಪಶು ಮಾಡುತ್ತಿದ್ದೀರಿ ಎಂದು ಆರೋಪಿಸಿದ್ದಾರೆ.