ಬೆಂಗಳೂರು : ಮೋಸ್ಟ್ ವಾಂಟೆಡ್ ಲಷ್ಕರ್-ಎ-ತೈಬಾ (LET) ಉಗ್ರ ಜುನೈದ್ ಅಹ್ಮದ್ ಬಗೆ, ಮಾಹಿತಿ ನೀಡುವವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐಎ ಘೋಷಣೆ ಮಾಡಿದೆ.
ಎನ್ಐಎ ಕಳೆದ ಮೂರು ವರ್ಷಗಳಿಂದ ದೇಶ-ವಿದೇಶಗಳಲ್ಲಿ ಜುನೈದ್ ಅಹ್ಮದ್ ಹುಡುಕಾಟ ನಡೆಸುತ್ತಿದೆ. 2023 ರಲ್ಲಿ ಸಿಸಿಬಿ ಪೊಲೀಸರು ಭೇದಿಸಿದ ಉಗ್ರ ಸಂಚಿನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಜುನೈದ್ ಅಹ್ಮದ್, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದನು. ಈ ಹಿಂದೆ ರಕ್ತಚಂದನ ಕೇಸ್ನಲ್ಲಿ ಬಂಧನವಾಗಿದ್ದ ಜುನೇದ್ ಅಹ್ಮದ್ ಟಿ. ನಾಸೀರ್ ಪ್ರೇರಣೆಯಿಂದ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿ, ಜೈಲಿನಿಂದ ಬಿಡುಗಡೆಯಾದ ಬಳಿಕ ದುಬೈ ಮೂಲಕ ತನ್ನ ಸಹಚರರಿಗೆ ಶಸ್ತ್ರಾಸ್ತ್ರ, ಪೂರೈಕೆ ಮಾಡಿದ ಆರೋಪ ಇದೆ.
ನಗರದ ಮೆಜೆಸ್ಟಿಕ್ ಪ್ರತಿ ಕಂಬಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಉಗ್ರನ ಬಗ್ಗೆ ಮಾಹಿತಿ ನೀಡುವವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿ ಪೋಸ್ಟರ್ಗಳು ಹಾಕಲಾಗಿದೆ. ಸಿಟಿ ಮತ್ತು ತಾಲ್ಲೂಕು ಮಟ್ಟದಲ್ಲಿ ಎನ್ಐಎ ಅಧಿಕಾರಿಗಳು ವಾಂಟೆಡ್ ಪೋಸ್ಟರ್ ಅಂಟಿಸಿ ಸಾರ್ವಜನಿಕ ಸಹಕಾರ ಕೋರುತ್ತಿದ್ದಾರೆ.
ಎನ್ಐಎ ಸೂಚಿಸಿದ್ದು, ಉಗ್ರನ ಬಗ್ಗೆ, ಯಾವುದೇ ಉಪಯುಕ್ತ ಮಾಹಿತಿ ದೊರೆತರೆ ತಕ್ಷಣ ಸಂಪರ್ಕಿಸಬೇಕು, ಮತ್ತು ನೀಡಲಾದ ಮಾಹಿತಿ ಚೌಕಟ್ಟಿನಲ್ಲಿ ಅಪರಾಧ ತಡೆಗೆ ಸಹಾಯ ಮಾಡಲಿದೆ.
ಇದನ್ನೂ ಓದಿ : ಟಾಯ್ಲೆಟ್ ಕಮೋಡ್ ತಯಾರಿಸುತ್ತಿದ್ದ ಈ ಕಂಪನಿ ಈಗ AI ಚಿಪ್ ತಯಾರಿ ಕ್ಷೇತ್ರದಲ್ಲೂ ಫೇಮಸ್!



















