ಬೆಂಗಳೂರು : ರಾಜ್ಯದ ರೈಲ್ವೆ ಸಂಪರ್ಕ ಜಾಲಕ್ಕೆ ಮತ್ತೊಂದು ಹೊಸ ಸೇರ್ಪಡೆಯಾಗುತ್ತಿದ್ದು, ನಾಳೆ ಬೆಂಗಳೂರು ಟು ಬೆಳಗಾವಿ ವಂದೇ ಭಾರತ್ ರೈಲಿಗೆ ಕೆಎಸ್ ಆರ್ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ವಂದೇ ಭಾರತ್ ಟ್ರೈನ್ ಉತ್ತರ ಕರ್ನಾಟಕ ಮಂದಿಯ ಬಹುದಿನದ ಕನಸಾಗಿದ್ದು, ಕರ್ನಾಟಕದ 11 ನೇ ಹೊಸ ವಂದೇ ಭಾರತ್ ರೈಲಾಗಿರಲಿದೆ. ಈ ರೈಲು 8 ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದು, ಬುಧವಾರ ಹೊರತು ಪಡಿಸಿ ವಾರದ 6 ದಿನಗಳು ಈ ರೈಲು ಸಂಚಾರ ನಡೆಸುತ್ತದೆ.
ವಂದೇ ಭಾರತ್ ರೈಲು ಸಿಲಿಕಾನ್ ಸಿಟಿಯಿಂದ ಕುಂದಾನಗರಿ ನಡುವಿನ ಓಡಾಟದಿಂದ ಪ್ರಯಾಣದ ಸಮಯದಲ್ಲಿ ಭಾರೀ ಇಳಿಕೆಯಾಗಲಿದೆ. 6 ಜಿಲ್ಲಾ ಕೇಂದ್ರಗಳಲ್ಲಿ ನಿಲುಗಡೆಯಾಗಲಿದ್ದು, ಕಿತ್ತೂರು ಕರ್ನಾಟಕ, ದಕ್ಷಿಣ ಕರ್ನಾಟಕ ಮೂಲಕ ರಾಜ್ಯ ರಾಜಧಾನಿ ಸಂಪರ್ಕ ಬೆಳೆಸುತ್ತದೆ. ಬೆಳಗಾವಿಯಿಂದ ಬೆಳಗ್ಗೆ 5:20ಕ್ಕೆ ಹೊರಟು ಮಧ್ಯಾಹ್ನ 1:50ಕ್ಕೆ ರಾಜಧಾನಿ ಬೆಂಗಳೂರನ್ನು ತಲುಪುತ್ತದೆ. ಹಾಗೂ ಮಧ್ಯಾಹ್ನ 2:20ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 10:40ಕ್ಕೆ ಬೆಳಗಾವಿ ತಲುಪುವ ಈ ರೈಲು ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ ನಡುವೆ ಸಂಪರ್ಕ ಸಾಧಿಸುತ್ತದೆ.
“ಎಲ್ಲಿಂದ ಎಲ್ಲಿಗೆ ಎಷ್ಟು ದರ”
ಎಲ್ಲಿಂದ ಎಲ್ಲಿಗೆ ಚೇರ್ ಕಾರ್ ಎಕ್ಸಿಕ್ಯೂಟಿವ್ ಚೇರ್ ಕಾರ್.
ಬೆಂಗಳೂರು ಟು ಬೆಳಗಾವಿ 1264 ರೂ. 2535 ರೂ.
ಬೆಂಗಳೂರು ಟು ಧಾರವಾಡ 1049 ರೂ. 2098 ರೂ.
ಬೆಂಗಳೂರು ಟು ಹುಬ್ಬಳ್ಳಿ 1090 ರೂ. 2034 ರೂ.
ಬೆಂಗಳೂರು ಟು ಹಾವೇರಿ 907 ರೂ. 1810 ರೂ.
ಬೆಂಗಳೂರು ಟು ದಾವಣಗೆರೆ 800 ರೂ. 1590 ರೂ.
ಬೆಂಗಳೂರು ಟು ತುಮಕೂರು 403 ರೂ. 788 ರೂ.


















