ಮೈಸೂರು: ನಾಡ ಬಾಂಬ್ ಸ್ಪೋಟಗೊಂಡು ಮಹಿಳೆಯ ಮುಖ ಛಿದ್ರಗೊಂಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹುಳಲಾಲು ಗ್ರಾಮದಲ್ಲಿ ನಡೆದಿದೆ.
ಕಮಲಮ್ಮ (55) ಗಾಯಗೊಂಡ ಮಹಿಳೆ. ಮನೆಯ ಮುಂಭಾಗದಲ್ಲಿರುವ ತೋಟದಲ್ಲಿ ಅಡಿಕೆಕಾಯಿ ಎಂದು ಭಾವಿಸಿ ನಾಡ ಬಾಂಬ್ ನ್ನು ಮನೆಗೆ ತಂದು ಸುತ್ತಿಗೆಯಿಂದ ಚೆಚ್ಚಿದ ವೇಳೆ ಬಾಂಬ್ ಸ್ಫೋಟಗೊಂಡಿದೆ. ಪರಿಣಾಮ ಕಮಲಮ್ಮನ ಮುಖ, ಕೈಕಾಲು, ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ.
ಸದ್ಯ ಗಾಯಾಳು ಕಮಲಮ್ಮಗೆ ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೈತರು ಕಾಡು ಹಂದಿಗಳ ಹಾವಳಿ ತಪ್ಪಿಸಲು ತೋಟದಲ್ಲಿ ನಾಡ ಬಾಂಬ್ ಇಟ್ಟಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.