ಬಳ್ಳಾರಿ : ವ್ಯಕ್ತಿಯೋರ್ವನಿಗೆ ಮಂಗಳಮುಖಿ ಮೇಲೆ ಪ್ರೀತಿ ಅಂಕುರಿಸಿತ್ತು. ಆ ಪ್ರೀತಿ ಹಲವರ ವಿರೋಧಕ್ಕೆ, ಅಪಸ್ವರಕ್ಕೆ ಕಾರಣವಾಗಿತ್ತು. ಆದರೆ, ಈಗ ಪ್ರಿಯಕರನೇ ಪ್ರೇಯಸಿಯನ್ನು ಹತ್ಯೆಗೈದು ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯ (Ballari) ಇಂದಿರಾನಗರದ ಡೈರಿ ಕ್ರಾಸ್ ಹತ್ತಿರ ಈ ಘಟನೆ ನಡೆದಿದೆ.
ಬಳ್ಳಾರಿ ತಾಲೂಕಿನ ಚಾಗನೂರು ಗ್ರಾಮದ ಮಂಗಳಮುಖಿ ಸುಹಾಸಿನಿ (29) ಹಾಗೂ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲಪನಗುಡಿಯ ಶೇಖರ್ (27) ಸಾವನ್ನಪ್ಪಿರುವ ಪ್ರೇಮಿಗಳು. ಶೇಖರ್ ಕಳೆದ ಐದು ವರ್ಷಗಳಿಂದಲೂ ಸುಹಾಸಿನಿಯನ್ನು ಪ್ರೀತಿಸುತ್ತಿದ್ದ. ಹೀಗಾಗಿ ಒಬ್ಬರೂ ಒಟ್ಟಿಗೆ ಇದ್ದರು. ಆದರೆ ಇಂದು ಇಬ್ಬರೂ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬಳ್ಳಾರಿಯ ಇಂದಿರಾ ನಗರದ ಮನೆಯಲ್ಲಿ ಮಂಗಳಮುಖಿ ಸುಹಾಸಿನಿ ಹಾಗೂ ಶೇಖರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಪೈಕಿ ಓರ್ವ ವ್ಯಕ್ತಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಮತ್ತೋರ್ವ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೊಲೆಯಾಗಿರುವ ಸುಹಾಸಿನಿ ಮಂಗಳಮುಖಿಯಾಗಿದ್ದರು. ಆಕೆಯನ್ನು ಮಂಗಳಮುಖಿಯಾಗಿರುವ ಲಕ್ಷ್ಮೀ ಎನ್ನುವವರು ದತ್ತು ಪಡೆದು, ಸಾಕಿದ್ದರು. ಲಕ್ಷ್ಮೀಯೊಂದಿಗೆ ಹಲವು ಮಂಗಳಮುಖಿಯರು ಕೂಡ ಸುಹಾಸಿನಿಯನ್ನು ಜೋಪಾನವಾಗಿ ಸಾಕಿದ್ದರು.
ಆದರೆ, ಸುಹಾಸಿನಿಗೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲ್ಪನ ಗುಡಿ ಗ್ರಾಮದ ಶೇಖರ್ ಮೇಲೆ ಲವ್ ಆಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಮನೆಯಲ್ಲಿ ಒಪ್ಪಿರಲಿಲ್ಲ. ಹೀಗಾಗಿ ಶೇಖರ್ ಬಳ್ಳಾರಿಯಲ್ಲೇ ಇದ್ದು ಆಟೋ ಓಡಿಸುತ್ತಿದ್ದ. ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಇಬ್ಬರೂ ಸೇರಿ ಬಳ್ಳಾರಿಯ ಇಂದಿರಾನಗರದಲ್ಲಿನ ಮನೆಯೊಂದರಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಆದರೆ ಇತ್ತೀಚೆಗೆ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು. ಕೆಲ ದಿನಗಳಿಂದ ಇಬ್ಬರೂ ದೂರವಾಗಿದ್ದರು. ಕೆಲವು ದಿನಗಳ ಹಿಂದೆ ಶೇಖರ್ ಮತ್ತೆ ಸುಹಾಸಿನಿ ಮನೆಗೆ ಬರಲು ಆಗಮಿಸಿದ್ದ. ಮತ್ತೆ ಜಗಳ ಶುರುವಾಗಿದ್ದವು.
ಈ ಮಧ್ಯೆ ಶೇಖರ್ ಮನೆಯಲ್ಲಿ ಬೇರೆ ಹುಡುಗಿಯೊಂದಿಗೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರು. ಈ ವಿಚಾರವೂ ಜಗಳಕ್ಕೆ ಕಾರಣವಾಗಿತ್ತು. ಈ ಜಗಳವೇ ವಿಕೋಪಕ್ಕೆ ಹೋಗಿ ಶೇಖರ್, ಸುಹಾಸಿನಿಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದುಬಂದಿದೆ. ಸದ್ಯ ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆ ನಂತರವೇ ಸತ್ಯಾಸತ್ಯತೆ ತಿಳಿಯಲಿದೆ.
ಇದನ್ನೂ ಓದಿ : ಆಸ್ಟ್ರೇಲಿಯಾ ಟೂರ್ನಿಯಿಂದ ಔಟ್ | ಟೀಂ ಇಂಡಿಯಾ ತಲೆಕೆಡಿಸಿಕೊಳ್ಳಲ್ಲ ಎಂದ ಕೋಚ್ ಸಿತಾಂಶು ಕೋಟಕ್!


















