ಕೊಪ್ಪಳ: ವ್ಯಕ್ತಿಯೋರ್ವನನ್ನು ಬೆನ್ನಟ್ಟಿ ಮನಬಂದಂತೆ ಥಳಿಸಿ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.
ಜಿಲ್ಲೆಯ ತಾವರಗೇರಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಚೆನ್ನಪ್ಪ ನಾರಿನಾಳ ಕೊಲೆಯಾಗಿರುವ ವ್ಯಕ್ತಿ. ಕೊಲೆಯಾಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ತಾವರಗೇರಾ ಪಟ್ಟಣದ ಹೃದಯ ಭಾಗವಾದ ಸಿಂಧನೂರು ಸರ್ಕಲ್ ನ ಎಲ್. ಜೆ ಅಯ್ಯಂಗಾರ್ ಬೇಕರಿ ಮುಂಭಾಗದಲ್ಲಿ ಭಯಾನಕವಾಗಿ ಕೊಲೆ ಮಾಡಲಾಗಿದೆ. ಬೇಕರಿಯ ಸಿಸಿ ಕ್ಯಾಮರಾದಲ್ಲಿ ಕೊಲೆಯ ಸಂಪೂರ್ಣ ದೃಶ್ಯ ಸೆರೆಯಾಗಿದೆ.
ಬೈಕ್ ಮೇಲೆ ಬರುತ್ತಿದ್ದ ಚೆನ್ನಪ್ಪನ ನಾರಿನಾಳನನ್ನು ದುಷ್ಕರ್ಮಿಗಳು ಬೆನ್ನು ಹತ್ತಿ ಅಟ್ಯಾಕ್ ಮಾಡಿದ್ದಾರೆ. ನಂತರ ಎರಡೇ ನಿಮಿಷದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ವೇಳೆ ರಕ್ಷಣೆಗಾಗಿ ಚೆನ್ನಪ್ಪ ಬೇಕರಿಗೆ ಬಂದಿದ್ದಾರೆ. ಆದರೂ ಬಿಡದ ದುಷ್ಕರ್ಮಿಗಳು ಮಚ್ಚುಗಳಿಂದ ಹಲ್ಲೆ ಮಾಡಿದ್ದಾರೆ. ಕೈ ಮುಗಿದು ಬೇಡಿಕೊಂಡರೂ ಬಿಡದ ದುಷ್ಕರ್ಮಿಗಳು ಬೇಕರಿಯಿಂದ ಹೊರಗಡೆ ಎಳೆದು ಹೊರಹಾಕಿ ಕೊಲೆ ಮಾಡಿದ್ದಾರೆ.