ಬೆಂಗಳೂರು ಗ್ರಾಮಾಂತರ: ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆ ನಡೆದಿದ್ದು, ಬಹಳ ದುಃಖದ ವಿಚಾರ. ಸರಿಯಾಗಿ ನೋಡದೆ ಟೇಕ್ ಆಪ್ ಮಾಡಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಟೆಕ್ನಿಕಲ್ ಚೆಕ್ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಈ ಘಟನೆ ಬಗ್ಗೆ ಕೇಂದ್ರ ಸರಕಾರ ಸರಿಯಾಗಿ ತನಿಖೆ ಮಾಡಬೇಕು. ಮುಂದೆ ಈ ರೀತಿ ಆಗದಂತೆ ಎಚ್ವರಿಕೆ ವಹಿಸಬೇಕು ಎಂದಿದ್ದಾರೆ.