ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಫ್ಲೈ ಓವರ್ ನಿರ್ಮಾಣವನ್ನು ವಿರೋಧಿಸಿ ಸಂಸದ ಯದುವೀರ್ ಅವರು ಸಿಎಂ ಸಿದ್ದರಾಮಯ್ಯಗೆ ಸುದೀರ್ಘ ಪತ್ರ ಬರೆದಿದ್ದಾರೆ. ಮೈಸೂರು ನಗರ ಬೆಳೆಯುತ್ತಲೇ ಇರುವುದರಿಂದ ಅಭಿವೃದ್ಧಿಯು ಪಾರದರ್ಶಕವಾಗಿರಬೇಕೆಂದು ಹೇಳಿರುವ ಅವರು, ಫ್ಲೈಓವರ್ಗಳ ಬದಲಿಗೆ ಯಾವ ಕ್ರಮ ಕೈಗೊಳ್ಳಬಹುದೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ತಮ್ಮ ಟ್ವೀಟರ್ನಲ್ಲಿ ಸಂಸದ ಯದುವೀರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಯದುವೀರ್ ಸಿಎಂಗೆ ಬರೆದ ಪತ್ರದಲ್ಲೇನಿದೆ?
ಯದುವೀರ್ ಸಿಎಂಗೆ ಮನವಿ ಮಾಡಿರುವ ಪತ್ರದಲ್ಲಿ, ಜವಾಬ್ದಾರಿಯುತ ಅಭಿವೃದ್ಧಿಯ ಮೂಲಕ ಮೈಸೂರಿನ ಪರಂಪರೆಯನ್ನು ಸಂರಕ್ಷಿಸಬೇಕಿದೆ. ಮೈಸೂರು ನಗರ ಬೆಳೆಯುತ್ತಲೇ ಇರುವುದರಿಂದ, ನಮ್ಮ ಅಭಿವೃದ್ಧಿಯು ಪಾರದರ್ಶಕವಾಗಿರಬೇಕು, ದತ್ತಾಂಶ ಆಧಾರಿತವಾಗಿರಬೇಕು ಮತ್ತು ಪರಂಪರೆಯಲ್ಲಿ ಬೇರೂರಿರಬೇಕು. ವಿನೋಬಾ ರಸ್ತೆ ಮತ್ತು ಝಾನ್ಸಿ ರಾಣಿ ಲಕ್ಷ್ಮಿಬಾಯಿ ರಸ್ತೆಯ ಪ್ರಸ್ತಾವಿತ ಮೇಲ್ಸೇತುವೆಗಳ ಬಗ್ಗೆ ನನ್ನ ಕಳವಳವನ್ನು ವ್ಯಕ್ತಪಡಿಸಿ ನಾನು ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತಿದ್ದೇನೆ. ಯೋಜಿತವಲ್ಲದ ನಗರ ವಿಸ್ತರಣೆಗಾಗಿ ಜೀವಂತ ಪರಂಪರೆಯ ನಗರವಾಗಿ ಮೈಸೂರಿನ ಗುರುತನ್ನು ಅಳಿಸಬಾರದು. ತನ್ನ ಸೊಬಗು, ಹಸಿರು ಅಥವಾ ನನ್ನ ಸಾಂಸ್ಕೃತಿಕತೆಯನ್ನು ಕಳೆದುಕೊಳ್ಳದೆ ಪರಿಣಾಮಕಾರಿಯಾಗಿ ಚಲಿಸುವ ಆಧುನಿಕ ಮೈಸೂರಿನ ನಿರ್ಮಾಣ ನಮ್ಮ ಗುರಿಯಾಗಿರಬೇಕು ಎಂದು ಬರೆದಿದ್ದಾರೆ.
ಎಕ್ಸ್ನಲ್ಲಿ ಯದುವೀರ್ ಹಂಚಿಕೊಂಡ ಪೋಸ್ಟ್ |
ಫ್ಲೈಓವರ್ಗಳ ಬದಲಿಗೆ, ಅಭಿವೃದ್ಧಿಗಾಗಿ ಯಾವ ಅಂಶಗಳ ಮೇಲೆ ಕೇಂದ್ರೀಕರಿಸಬಹುದೆಂದು ಬರೆದಿರುವ ಯದುವೀರ್, ಸ್ಮಾರ್ಟ್ ಸಂಚಾರ ನಿರ್ವಹಣೆ ಮತ್ತು ಸಿಂಕ್ರೋನೈಸ್ ಮಾಡಿದ ಸಂಕೇತಗಳು, ಸಾರ್ವಜನಿಕ ಸಾರಿಗೆ ಮತ್ತು ಪ್ರವೇಶಸಾಧ್ಯತೆಯ ಸುಧಾರಣೆ ಮತ್ತು ಅಕ್ರಮ ಪಾರ್ಕಿಂಗ್ ಮತ್ತು ಅತಿಕ್ರಮಣಗಳ ವಿರುದ್ಧ ಕಠಿಣ ಕ್ರಮ ಈ ಎಲ್ಲಾ ಅಂಶಗಳನ್ನು ಸಿಎಂ ಮುಂದಿಟ್ಟಿದ್ದಾರೆ.
ಇದನ್ನೂ ಓದಿ : “ದಯವಿಟ್ಟು ಸಹಾಯ ಮಾಡಿ! ನನ್ನ ODI ಕೆರಿಯರ್ ಉಳಿಸಿ”: ಎಬಿಡಿ ಮೊರೆ ಹೋದ ಸೂರ್ಯಕುಮಾರ್!



















