ಸರ್ಕಾರ ಬೆಂಗಳೂರು ಪೊಲೀಸ್ ಕಮಿಷನರ್ ಸಸ್ಪೆಂಡ್ ಮಾಡಿದ ಕ್ರಮವನ್ನು ಕಾಂಗ್ರೆಸ್ ಸಂಸದ ರಾಜಶೇಖರ್ ಹಿಟ್ನಾಳ್ ಸಮರ್ಥಿಸಿಕೊಂಡಿದ್ದಾರೆ.
ಪೊಲೀಸ್ ಕಮಿಷನರ್ ಸರಿಯಾಗಿ ಕೆಲsಸ ನಿರ್ವಹಿಸಿಲ್ಲ. ಹೀಗಾಗಿ ಕ್ರಮ ಆಗಿದೆ. ಕಾಲ್ತುಳಿತ ಘಟನೆ ಬಳಿಕ ಸಿಎಂ ಒಳ್ಳೆ ಕ್ರಮ ಕೈಗೊಂಡಿದ್ದಾರೆ. ಅಷ್ಟು ಕ್ರೇಜ್ ಇರುವ ಪಂದ್ಯ. ಜನ ಸೇರುತ್ತಾರೆ ಅಂತಾ ಗೊತ್ತು. ಹೀಗಾಗಿ ಪೊಲೀಸ್ ಕಮಿಷನರ್ ಸಮರ್ಥವಾಗಿ ನಿಭಾಯಿಬೇಕಿತ್ತು.
ಅದು ಕಮಿಷನರ್ ಕರ್ತವ್ಯ ಕೂಡ ಅಂತಾ ಸಂಸದ ಹಿಟ್ನಾಳ್ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.ಅಲ್ಲದೆ, ಎಲ್ಲ ಘಟನೆಗೂ ಸಿಎಂ ಹೋಮ್ ಮಿನಿಸ್ಟರ್ ಹೊಣೆ ಆಗಲ್ಲ ಆಂತಾ ತಮ್ಮ ಸರ್ಕಾರದ ಪರ ಬ್ಯಾಟ್ ಬೀಸಿದ್ದಾರೆ.