ರಾಮನಗರ: ಹೇಮಾವತಿ ಕೆನಾಲ್ ಸಮಸ್ಯೆ ಬಗ್ಗೆ ಸಂಸದ ಮಂಜುನಾಥ್ ಮಾತನಾಡಿದ್ದಾರೆ.
ಹೇಮೆಗಾಗಿ ತುಮಕೂರು ಜನಪ್ರತಿನಿಧಿಗಳ ಹೋರಾಟಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಚಾರವಾಗಿ ಹೇಳಿಕೆಗಳಿಂದ ಪ್ರಯೋಜನ ಇಲ್ಲ. ನಾನು ಸಹ ಈ ಬಗ್ಗೆ ಸಿಎಂ ಗೆ ಪತ್ರ ಬರೆದಿದ್ದೇನೆ. ನಾವು ಬೇರೆ ದೇಶದವರಲ್ಲ. ಈ ವಿಷಯವಾಗಿ ಎಲ್ಲ ಪಕ್ಷದ ಮುಖಂಡರು, ರೈತರ ಸಭೆ ಆಗಬೇಕು. ಎರಡು ಜಿಲ್ಲೆಯ ರೈತರಿಗೆ ಅನ್ಯಾಯವಾಗಬಾರದು ಎಂದಿದ್ದಾರೆ.
ಆ ನಿಟ್ಟಿನಲ್ಲಿ ಕ್ರಮವಾಗಬೇಕಿದೆ. ಇದರಲ್ಲಿ ರಾಜಕೀಯ ಹೇಳಿಕೆಗಳಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.