ಚಿತ್ರದುರ್ಗ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಶವಾಗಾರದ ಪ್ರೀಜರ್ ಕೆಟ್ಟು ನಿಂತ ಹಿನ್ನೆಲೆಯಲ್ಲಿ ಅನಾಥ, ಅನಾಮಧೇಯ ಹಾಗೂ ಅಪಘಾತದ ಹೆಣ ಹೆಡಲು ಸಿಬ್ಬಂದಿ ಹೆಣಗಾಟ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಂಸದ ಗೋವಿಂದ ಕಾರಜೋಳ ಹೊಸ ಪ್ರೀಜರ್ ತರಿಸಿಕೊಟ್ಟಿದ್ದಾರೆ.
10 ಲಕ್ಷ ಅನುದಾನದಲ್ಲಿ ಶವ ಸಂಸ್ಕರಣ ಪೆಟ್ಟಿಗೆಯನ್ನು ಸಂಸದ ಗೋವಿಂದ ಕಾರಜೋಳ ತರಿಸಿಕೊಟ್ಟಿದ್ದಾರೆ. ಹಿಂದೆ ಇದ್ದ ಪ್ರೀಜರ್ ಗಳು ಕಳೆದ ನಾಲ್ಕು ತಿಂಗಳುಗಳಿಂದ ಕೆಟ್ಟು ನಿಂತಿದ್ದವು. ಇದರಿಂದಾಗಿ ಸಿಬ್ಬಂದಿ ತುಂಬಾ ಕಷ್ಟ ಪಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಂಸದರು ಪ್ರೀಜರ್ ತರಿಸಿಕೊಟ್ಟಿದ್ದಾರೆ.